ಕಠ್ಮಂಡು: ನೇಪಾಳದ ಆಡಳಿತ ದೀರ್ಘಕಾಲ ಉಳಿಯುವಂತಹ ಸಂವಿಧಾನವನ್ನು ರಚಿಸುವ ಪ್ರಬುದ್ಧತೆ ಪ್ರದರ್ಶಿಸಲಿದೆ ಎಂದು ಭಾರತ ವಿಶ್ವಾಸ ವ್ಯಕ್ತಪಡಿಸಿದೆ.
ನೇಪಾಳಕ್ಕೆ ವಿಶೇಷ ಪ್ರತಿನಿಧಿಯಾಗಿ ತೆರಳಿರುವ ಭಾರತದ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಎಸ್.ಜೈಶಂಕರ್ ಅಲ್ಲಿನ ಸಂವಿಧಾನ ರಚನೆ ಬಗ್ಗೆ ಮಾತನಾಡಿದ್ದು ಸಂವಿಧಾನ ರಚನೆ ಪ್ರಕ್ರಿಯೆಗೆ ಭಾರತ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ.
ನೇಪಾಳದ ಸಂವಿಧಾನ ರಚನೆ ಬಗ್ಗೆ ಚರ್ಚೆಯಾಗುತ್ತಿದೆ. ಹೊಸ ಸಂವಿಧಾನ ರಚನೆ ಪ್ರಕ್ರಿಯೆ ಚಾಲ್ತಿಯಲ್ಲಿದೆ.
Advertisement