ಈ ಬಗ್ಗೆ ಸರ್ಕಾರದ ತೀರ್ಮಾನವನ್ನು ಪ್ರಕಟಿಸಿದ ಡೆಪ್ಯುಟಿ ಮುಖ್ಯಮಂತ್ರಿ ಕದಿಯಾಮ್ ಶ್ರೀಹರಿ, ಸೆಪ್ಟೆಂಬರ್ 19ರಿಂದ ಈ ತೀರ್ಮಾನ ಜಾರಿಗೆ ಬಂದಿರುವುದಾಗಿ ಹೇಳಿದ್ದಾರೆ. ಆದಾಗ್ಯೂ, ಸೆಪ್ಟೆಂಬರ್ 19ಕ್ಕಿಂತ ಮುನ್ನ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ರು. 1.5 ಲಕ್ಷ ಮಾತ್ರ ನೀಡುವುದರ ಬಗ್ಗೆ ಈಗ ವಿವಾದ ಸೃಷ್ಟಿಯಾಗಿದೆ.