ಕೊರಾಪುಟ್: 5 ವರ್ಷದವನಾಗಿದ್ದಾಗ ಮಾಡಿದ್ದ ಸಣ್ಣ ಕಳ್ಳತನಕ್ಕೆ ಹೆದರಿ ಮನೆ ಬಿಟ್ಟು ಹೋಗಿದ್ದ ಬಾಲಕ ಮತ್ತೆ 7 ವರ್ಷಗಳ ನಂತರ ಹೆತ್ತವರ ಮಡಿಲು ಸೇರಿದ ಘಟನೆ ಬಿಹಾರದ ಅಂಬುಗಡ ಗ್ರಾಮದಲ್ಲಿ ನಡೆದಿದೆ.
ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ಗವರ್ದನ ಜಿಲ್ಲೆಯ ಲುಕಿ ಠಾಕೂರ್ ಎಂಬುವ ಪುತ್ರ ಅನೂಪ್ ಠಾಕೂರ್ 5 ವರ್ಷದವನಿದ್ದಾಗ ಮನೆಯಲ್ಲಿ ಸಣ್ಣ ಕಳ್ಳತನ ಮಾಡಿ ಮನೆ ಬಿಟ್ಟು ಓಡಿ ಹೋಗಿದ್ದ.
ಮನೆಯಿಂದ ಹೊರಟ ಅನೂಪ್ ರೈಲು ಹತ್ತಿ ವಿಶಾಖಪಟ್ಟಣ ತಲುಪಿದ್ದ ನಂತರ ವಿಶಾಖ ಪಟ್ಟಣ ರೈಲ್ವೆ ನಿಲ್ದಾಣದಲ್ಲಿ ಅಲೆಯುತ್ತಿದ್ದ ಅನೂಪ್ ನನ್ನು ಬುಡಕಟ್ಟು ಜನಾಂಗದ ಕಾರ್ಮಿಕಕ ಕುಟುಂಬವೊಂದು ತಮ್ಮ ಮನೆಗೆ ಕರೆದು ಕೊಂಡು ಹೋಗಿತ್ತು.
ನಂತರ ಅಜಿತ್ ಶಾ ಎಂಬುವರು ಅನೂಪ್ ನನ್ನು ದತ್ತು ತೆಗೆದುಕೊಂಡಿದ್ದರು. ಇತ್ತೀಚೆಗೆ ಅಜಿತ್ ಶಾ ಮನೆಯ ಅಕ್ಕಪಕ್ಕದ ನಿವಾಸಿಗಳು ಅನೂಪ್ ಮನೆ ವಿಳಾಸ ಕೇಳಿದ್ದಾರೆ. ತನ್ನ ಊರು, ತಂದೆಯ ಹೆಸರನ್ನು ಅನೂಪ್ ಹೇಳಿದ್ದಾನೆ. ನಂತರ ನಿವಾಸಿಗಳು ಅಂಬುಗಡ ಪೊಲೀಸರಿಗೆ ವಿಯ ತಿಳಿಸಿದ್ದಾರೆ.
ಇದಾದ ನಂತರ ಪೊಲೀಸರು ಅನೂಪ್ ತಂದೆಗೆ ವಿಷಯ ತಿಳಿಸಿದ್ದಾರೆ. ನಂತರ ಅನೂಪ್ ತಂದೆ ಎಲ್ಲಾ ಕಾನೂನು ನಿಯಮಗಳನ್ನು ಪೂರೈಸಿ ಮಗನನ್ನು ವಾಪಸ್ ತಮ್ಮ ಮನೆಗೆ ಕರೆದೊಯ್ದಿದ್ದಾರೆ.
Advertisement