ಕ್ಯಾಂಡಲ್ ಆರಿಸದೇ ಮಲಗಿದ್ದೇ ಮುಳುವಾಯ್ತು: ಬರೇಲಿಯಲ್ಲಿ ಆರು ಮಕ್ಕಳು ಸಜೀವ ದಹನ

ಕ್ಯಾಂಡಲ್ ನಿಂದಾಗಿ ಮನೆಗೆ ಹಬ್ಬಿದ ಬೆಂಕಿಯಿಂದ ಆರು ಮಂದಿ ಸಜೀವ ದಹನವಾಗಿರುವ ಘಟನೆ ಇಂದು ಬೆಳಗ್ಗೆ ಬರೇಲಿಯಲ್ಲಿ ನಡೆದಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬರೇಲಿ: ಕ್ಯಾಂಡಲ್ ನಿಂದಾಗಿ ಮನೆಗೆ ಹಬ್ಬಿದ ಬೆಂಕಿಯಿಂದ ಆರು ಮಕ್ಕಳು ಸಜೀವ ದಹನವಾಗಿರುವ ಘಟನೆ ಇಂದು ಬೆಳಗ್ಗೆ ಬರೇಲಿಯಲ್ಲಿ ನಡೆದಿದೆ.

ಖ್ವಿಲಾ ಪೊಲೀಸ್ ಠಾಣೆಯ ಕಾಳಿ ದಾಮ್ ದೇವಾಲಯ ಪ್ರದೇಶದಲ್ಲಿ ವಾಸವಿದ್ದ ರಾಜು ಕಶ್ಯಪ್ ಎಂಬುವರ ಮನೆಯಲ್ಲಿ ಈ ದುರಂತ ಸಂಭವಿಸಿದೆ. ರಾಜು ಕಶ್ಯಪ್ ಮತ್ತು ಆತನ ಪತ್ನಿ ಸಂಬಂಧಿಕರ ವಿವಾಹಕ್ಕಾಗಿ ಫಿಲಿಬಿತ್ ಗೆ ತೆರಳಿದ್ದರು. ಈ ವೇಳೆ ನಾಲ್ಕು ಸಹೋದರಿಯರು ಮತ್ತವರ ಇಬ್ಬರು ಸೋದರ ಸಂಬಂಧಿಗಳು ಮನೆಯಲ್ಲಿದ್ದರು. ನಿನ್ನೆ ಮಲಗುವ ಮುನ್ನ ಕ್ಯಾಂಡಲ್ ಆರಿಸದಿದ್ದದ್ದು ಅವಘಡಕ್ಕೆ ಕಾರಣವಾಗಿದೆ.

ಮನೆಯಲ್ಲಿ ಇದ್ದಕ್ಕಿದ್ದ ಹಾಗೆ ಹೊಗೆ ಹಾಗೂ ಬೆಂಕಿಯನ್ನು ನೋಡಿ ಆರು ಮಂದಿಯೂ ಹೊರಗೆ ಬರಲು ಹರಸಾಹಸ ಪಟ್ಟಿದ್ದಾರೆ. ಇದನ್ನು ನೋಡಿದ ಸ್ಥಳೀಯರು ಬಾಗಿಲು ಮುರಿದು ಅವರನ್ನು ರಕ್ಷಿಸಲು ಮುಂದಾಗಿದ್ದಾರೆ. ಈ ವೇಳೆ ಛಾವಣಿ ಕುಸಿದು ಆರು ಜನ ಸಜೀವ ದಹನವಾಗಿದ್ದಾರೆ. ಸಲೋನಿ(17), ಸಂಜನಾ(15), ಬೂರಿ(10), ದುರ್ಗಾ(8), ಮಹಿಮಾ(9), ದೆಬು(7) ಮೃತ ದುರ್ದೆವಿಗಳು.

ಮೃತ ದೇಹಗಳನ್ನು ಶವಪರೀಕ್ಷೆಗಾಗಿ ಕೊಂಡಯ್ಯಲಾಗಿದೆ ಎಂದು ಖ್ವಿಲಾ ಪೊಲೀಸ್ ಠಾಣೆಯ ಎಸ್ಪಿ ಸಮೀರ್ ಸೌರವ್ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com