ಕಡಪ: ಮದುವೆ ದಿಬ್ಬಣಕ್ಕೆ ಹೊರಟಿದ್ದ ವಾಹನಕ್ಕೆ ಲಾರಿ ಡಿಕ್ಕಿ- 5 ಸಾವು

ಮದುವೆ ದಿಬ್ಬಣಕ್ಕೆಂದು ಹೊರಟಿದ್ದ ವಾಹನಕ್ಕೆ ವೇಗವಾಗಿ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಡಪ-ಕರ್ನೂಲ್ ನ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕಡಪ: ಮದುವೆ ದಿಬ್ಬಣಕ್ಕೆಂದು ಹೊರಟಿದ್ದ ವಾಹನಕ್ಕೆ ವೇಗವಾಗಿ ಬರುತ್ತಿದ್ದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಡಪ-ಕರ್ನೂಲ್ ನ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ವಧುವಿನ ಕಡೆಯ 13 ಜನರನ್ನು ಟ್ರ್ಯಾಕ್ಟರ್ ಒಂದು ಮದುವೆ ದಿಬ್ಬಣಕ್ಕೆಂದು ಕಡಪದಲ್ಲಿರುವ ದೆವುನಿಗೆ ಹೊತ್ತುಯ್ಯುತ್ತಿತ್ತು. ಕೆಲ ದೂರ ಹೋಗುತ್ತಿದ್ದಂತೆ ಪೆಟ್ರೋಲ್ ಸಮಸ್ಯೆ ಉಂಟಾದ ಕಾರಣ ಟ್ರ್ಯಾಕ್ಟರನ್ನು ಪಕ್ಕದಲ್ಲಿ ನಿಲ್ಲಿಸಲಾಗಿತ್ತು. ಚಾಲಕ ಪೆಟ್ರೋಲ್ ಗಾಗಿ ಬಂಕ್ ಗಾಗಿ ಹುಡುಕಾಟ ನಡೆಸುತ್ತಿದ್ದ. ಈ ವೇಳೆ ವೇಗವಾಗಿ ಬರುತ್ತಿದ್ದ ಲಾರಿ ಹಿಂದಿನಿಂದ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಟ್ರ್ಯಾಕ್ಟರ್ ನಲ್ಲಿದ್ದ 13 ಮಂದಿಯ ಪೈಕಿ ಐವರು ಸ್ಥಳದಲ್ಲೇ ಸಾವನ್ನಪ್ಪಿ, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತಪಟ್ಟವರನ್ನು ಎ. ವೆಂಕಟ ರಮಣ (22), ಬಿ. ಲಕ್ಷ್ಮಿ ಪ್ರಸನ್ನ (10), ಚಾಲಕ ಜಿ. ಬಾಲರಾಜು, ಬಿ. ಬಾಲಕೃಷ್ಣ (30) ಎ. ಪೆದ್ದ ಪೆದ್ದಯ್ಯ (40) ಎಂದು ಗುರ್ತಿಸಲಾಗಿದೆ.

ಗಾಯಗೊಂಡವ 8 ಮಂದಿಯ ಪೈಕಿ ಇದೀಗ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಘಟನೆ ಬಳಿಕ ಲಾರಿ ಚಾಲಕ ತಲೆಮರೆಸಿಕೊಂಡಿದ್ದು, ಚಾಲಕನಿಗಾಗಿ ದುವ್ವುರು ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com