ಅಪಾಯಕಾರಿ ನಾಯಿಗಳನ್ನು ಕೊಲ್ಲುವ ಕೇರಳ ನಿರ್ಧಾರ ಕಾನೂನು ಬಾಹಿರ: ಮನೇಕಾ

ಅಪಾಯಕಾರಿ ಬೀದಿ ನಾಯಿಗಳನ್ನು ಕೊಲ್ಲುವ ಕೇರಳ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿರುವ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು,...
ಮನೇಕಾ ಗಾಂಧಿ
ಮನೇಕಾ ಗಾಂಧಿ

ನವದೆಹಲಿ: ಅಪಾಯಕಾರಿ ಬೀದಿ ನಾಯಿಗಳನ್ನು ಕೊಲ್ಲುವ ಕೇರಳ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ವಿರೋಧಿಸಿರುವ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು, ಇದೊಂದು ಕಾನೂನು ಬಾಹಿರ ಮತ್ತು ಅವೈಜ್ಞಾನಿಕ ನಿರ್ಧಾರ ಎಂದು ಹೇಳಿದ್ದಾರೆ.

ನಾಯಿಗಳ ಕ್ರಿಮಿನಾಶಕಕ್ಕಾಗಿ ರಾಜ್ಯಕ್ಕೆ ನೀಡಿದ ಹಣ ಎಲ್ಲಿ ಎಂದು ಪ್ರಶ್ನಿಸಿರುವ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ, ನೀವು ನಾಯಿಗಳನ್ನು ಕೊಂದರೆ, ಅದಕ್ಕೆ ಪ್ರತಿಯಾಗಿ ಅವು ಕಚ್ಚುತ್ತವೆ ಎಂದಿದ್ದಾರೆ.

ಅಪಾಯಕಾರಿ ಬೀದಿ ನಾಯಗಳನ್ನು ಕೊಲ್ಲುವ ಕೇರಳ ಸಚಿವ ಸಂಪುಟದ ನಿರ್ಧಾರ ಸರಿಯಲ್ಲ. ಇದು ನಾಯಿಗಳನ್ನು ಕೊಲ್ಲಲು ವಿನಾಯ್ತಿ ನೀಡಿದಂತಾಗುತ್ತದೆ ಎಂದಿದ್ದಾರೆ.
ಸ್ವತಃ ಪ್ರಾಣಿ ಹಕ್ಕುಗಳ ಕಾರ್ಯಕರ್ತೆಯಾಗಿರುವ ಮನೇಕಾ ಗಾಂಧಿ ಅವರು, ನಾಯಿಗಳ್ನು ಕೊಲ್ಲುವುದು ಕೇವಲ ಕಾನೂನು ಬಾಹಿರ ಮಾತ್ರವಲ್ಲ, ಅವುಗಳ ಸಂತತಿಗೆ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com