ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಶೆಹನಾಯ್ ಕಳ್ಳತನ

ವಾರಣಾಸಿಯ ಟೆಂಪಲ್ ಟೈನ್ ನಲ್ಲಿರುವ ಭಾರತ ರತ್ನ ಬಿಸ್ಮಿಲ್ಲಾ ಅವರ ಮಗನ ಮನೆಯಿಂದ ಐದು ಶೆಹನಾಯ್ ಗಳು...
ಬಿಸ್ಮಿಲ್ಲಾ ಖಾನ್
ಬಿಸ್ಮಿಲ್ಲಾ ಖಾನ್

ವಾರಣಾಸಿ: ವಾರಣಾಸಿಯ ಟೆಂಪಲ್ ಟೈನ್ ನಲ್ಲಿರುವ ಭಾರತ ರತ್ನ ಬಿಸ್ಮಿಲ್ಲಾ ಅವರ ಮಗನ ಮನೆಯಿಂದ ಐದು ಶೆಹನಾಯ್ ಗಳು ಕಳ್ಳತನವಾಗಿವೆ.

ಬಿಸ್ಮಿಲ್ಲಾ ಖಾನ್ ಅವರ ಪುತ್ರ ಕಾಜೀಮ್ ಹುಸೇನ್ ನವೆಂಬರ್ 30 ಭಾನುವಾರ ತಡರಾತ್ರಿ ಮನೆಗೆ ಬಂದಿದ್ದಾರೆ. ಈ ವೇಳೆ ಮೇನ್ ಗೇಟ್ ಗೆ ಹಾಕಿದ್ದ ಲಾಕ್ ಮುರಿದಿರುವುದು ಕಂಡು ಬಂದಿದೆ.

ಮನೆ ಒಳಗೆ ಬಂದು ನೋಡಿದಾಗ ಬಿಸ್ಮಿಲ್ಲಾ ಖಾನ್ ಅವರ ಶೆಹನಾಯ್ ಸೇರಿದಂತೆ ಹಲವು ಅಪರೂಪದ ಉಡುಗೊರೆಗಳು ಕಳವಾಗಿರುವುದು ತಿಳಿದು ಬಂದಿದೆ. ಬೆಳ್ಳಿ ಹಾಗೂ ಮರದಿಂದ ಮಾಡಿದ್ದ ಶೆಹನಾಯ್, ಅದರಲ್ಲೂ ಅತ್ಯಮೂಲ್ಯವಾದ ಮರದ ಶೆಹನಾಯ್ ಕಳುವಾಗಿದೆ ಎಂದು ಅವರು ಹೇಳಿದ್ದಾರೆ.

ಈ ಸಂಬಂಧ ಎಫ್ ಐ ಆರ್ ದಾಖಲಿಸಿಕೊಂಡಿರುವ ಪೊಲೀಸರು ಸ್ಥಳೀಯ ರಸ್ತೆಗಳಲ್ಲಿರುವ ಸಿಸಿಟಿವಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com