ತಮ್ಮ ನೆಚ್ಚಿನ ನಾಯಕಿಯನ್ನು ಕಳೆದುಕೊಂಡ ದುಃಖದಲ್ಲಿ ತಮಿಳುನಾಡಿನ ಸಹಸ್ರಾರು ಜನರು ಅಮ್ಮಾ, ಅಮ್ಮಾ ಎಂದು ಕೂಗುತ್ತಾ ಅವರ ನಿವಾಸದ ಹೊರಗೆ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಜಯಲಲಿತಾ ಅವರ ನಿವಾಸದ ಎದುರು ಬ್ಯಾರಿಕೇಡ್ ಗಳನ್ನು ಮುರಿದು ಬೆಂಬಲಿಗರು ಒಳನುಗ್ಗಲು ಪ್ರಯತ್ನಿಸಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ದಂಡ ಪ್ರಯೋಗಿಸಬೇಕಾಗಿ ಬಂತು.