ಮತ್ತೆ ಸಾಬೀತು: ತಮಿಳರ ಪಾಲಿಗೆ ಡಿಸೆಂಬರ್ ಅಪಶಕುನದ ತಿಂಗಳು

ಜಯಲಲಿತಾ ಸಾವಿನೊಂದಿಗೆ ತಮಿಳರ ಪಾಲಿಗೆ ಡಿಸೆಂಬರ್ ಅಪಶಕುನದ ತಿಂಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ಡಿಸೆಂಬರ್ ತಿಂಗಳಿನಲ್ಲೇ ತಮಿಳುನಾಡಿನಲ್ಲಿ ...
ಜಯಲಲಿತಾ
ಜಯಲಲಿತಾ
Updated on

ಚೆನ್ನೈ: ಜಯಲಲಿತಾ ಸಾವಿನೊಂದಿಗೆ ತಮಿಳರ ಪಾಲಿಗೆ ಡಿಸೆಂಬರ್ ಅಪಶಕುನದ ತಿಂಗಳು ಎಂಬುದು ಮತ್ತೊಮ್ಮೆ ಸಾಬೀತಾಗಿದೆ.ಡಿಸೆಂಬರ್ ತಿಂಗಳಿನಲ್ಲೇ ತಮಿಳುನಾಡಿನಲ್ಲಿ ಏನಾದರೊಂದು ಅನಾಹುತ ಸಂಭವಿಸುತ್ತಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಿದೆ. ಹಲವು ಪ್ರಮುಖ ನಾಯಕರು ಡಿಸೆಂಬರ್ ತಿಂಗಳಲ್ಲೇ ಕೊನೆಯುಸಿರೆಳೆದಿದ್ದಾರೆ.

ಮದ್ರಾಸ್ ಪ್ರಾಂತ್ಯದ ಮುಖ್ಯಮಂತ್ರಿಯಾಗಿ, ಕೇಂದ್ರ ಗೃಹ ಸಚಿವರಾಗಿದ್ದ ಸಿ. ರಾಜಗೋಪಾಲಚಾರಿ ಮೃತಪಟ್ಟಿದ್ದು 1972, ಡಿಸೆಂಬರ್ 25ರಂದು.

ಅದೇ ರೀತಿ, ದ್ರಾವಿಡ ಚಳವಳಿಯ ನಾಯಕ ಪೆರಿಯಾರ್ ರಾಮಸ್ವಾಮಿ, 1972, ಡಿಸೆಂಬರ್ 24ರಂದು ಕೊನೆಯುಸಿರೆಳೆದರು. ಜಯಲಲಿತಾ ರಾಜಕೀಯ ಗುರು ಎಂಜಿಆರ್ ರಾಮಚಂದ್ರನ್​ ಮೃತಪಟ್ಟಿದ್ದೂ ಸಹ 1987ರ ಡಿಸೆಂಬರ್ 24ರಂದು.

ಇದಲ್ಲದೇ, 2004ರಲ್ಲಿ ಚೆನ್ನೈನಲ್ಲಿ ನೂರಾರು ಮಂದಿಯ ಸಾವು-ನೋವಿಗೆ ಕಾರಣವಾದ ಮೃತ್ಯು ಸ್ವರೂಪಿ ಸುನಾಮಿ ಅಪ್ಪಳಿಸಿದ್ದೂ ಡಿಸೆಂಬರ್ 26ರಂದು.

ಇನ್ನು  ಭಾರಿ ಮಳೆಯಿಂದಾಗಿ ಚಿನ್ನೈ ಪ್ರವಾಹ ಪರಿಸ್ಥಿತಿ ಎದುರಿಸಿದ್ದೂ ಕಳೆದ ವರ್ಷ ಡಿಸೆಂಬರ್ 14ರಂದು.ಇದೀಗ, ತಮಿಳರ ಆರಾಧ್ಯ ದೈವ ಜಯಲಲಿತಾ ನಿಧನ, ತಮಿಳರ ಪಾಲಿಗೆ ಡಿಸೆಂಬರ್​ ಶೋಕಸಾಗರದಲ್ಲಿ ಮುಳುಗಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com