ಇದರಂತೆ ಪ್ರಕರಣ ಸಂಬಂಧ ದೆಹಲಿ ತನಿಖಾ ತಂಡ ತನಿಖೆ ನಡೆಸಿದ್ದು, ತನಿಖೆ ವೇಳೆ ಆಂತರಿಕ ವರದಿಯ ಪ್ರಕಾರ, ಕಾರ್ಯಕ್ರಮ ನಡೆಯುತ್ತಿರುವ ಸಂದರ್ಭದಲ್ಲಿ ಕನ್ಹಯ್ಯ ಕುಮಾರ್ ಸಬರ್ಮತಿ ಹಾಸ್ಟೆಲ್ ಮತ್ತು ಗಂಗಾ ದಾಭಾದಲ್ಲಿಯೇ ಇದ್ದ ಎಂದು ಹೇಳಲಾಗುತ್ತಿದ್ದು, ದೇಶ ವಿರೋಧಿ ಘೋಷಣೆಗಳನ್ನು ಕೂಗಿದ್ದ. ಅಲ್ಲದೆ, ಕಾಲೇಜಿನ ಭದ್ರತಾ ಸಿಬ್ಬಂದಿಗಳಿಗೆ ಮುಂಗೆ ನಿಂತಿರುವ ವಿದ್ಯಾರ್ಥಿಗಳನ್ನು ತೆರವು ಗೊಳಿಸಿ ಪ್ರತಿಭಟನೆ ಕಾಲ್ನಡಿಗೆಯಲ್ಲಿ ಸಾಗುವಂತೆ ಮಾಡುವಂತೆ ಸೂಚಿಸಿದ್ದ ಎಂದು ಪ್ರತ್ಯಕ್ಷದರ್ಶಿಯೊಬ್ಬ ಮಾಹಿತಿ ನೀಡಿದ್ದಾನೆಂದು ಹೇಳಿಕೊಂಡಿದೆ.