ಎನ್ ಕೌಂಟರ್ ಅಂತ್ಯಗೊಳ್ಳಲು ಸಮಯಬೇಕು: ಸೇನಾಧಿಕಾರಿ

ಪಠಾಣ್ ಕೋಟ್ ಸೇನಾ ವಾಯುನೆಲೆಯಲ್ಲಿ ನಡೆಯುತ್ತಿರುವ ಉಗ್ರ ವಿರುದ್ಧ ಎನ್ ಕೌಂಟರ್ ಅಂತ್ಯಗೊಳ್ಳಲು ಕಾಲಾವಕಾಶಬೇಕು ಎಂದು ಸೇನಾಧಿಕಾರಿಗಳು ಸೋಮವಾರ ಹೇಳಿದ್ದಾರೆ...
ಎನ್ ಕೌಂಟರ್ ಅಂತ್ಯಗೊಳ್ಳಲು ಸಮಯಬೇಕು: ಸೇನಾಧಿಕಾರಿ
ಎನ್ ಕೌಂಟರ್ ಅಂತ್ಯಗೊಳ್ಳಲು ಸಮಯಬೇಕು: ಸೇನಾಧಿಕಾರಿ
ಪಠಾಣ್ ಕೋಟ್: ಪಠಾಣ್ ಕೋಟ್ ಸೇನಾ ವಾಯುನೆಲೆಯಲ್ಲಿ ನಡೆಯುತ್ತಿರುವ ಉಗ್ರ ವಿರುದ್ಧ ಎನ್ ಕೌಂಟರ್ ಅಂತ್ಯಗೊಳ್ಳಲು ಕಾಲಾವಕಾಶಬೇಕು ಎಂದು ಸೇನಾಧಿಕಾರಿಗಳು ಸೋಮವಾರ ಹೇಳಿದ್ದಾರೆ. 
ವಾಯುನೆಲೆ ಮೇಲಿನ ಉಗ್ರರ ದಾಳಿ ಕುರಿತಂತೆ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿರುವ ವಾಯುಸೇನೆ ಹಾಗೂ ಎನ್ಎಸ್ ಜಿ ಮುಖ್ಯಸ್ಥರು ಉಗ್ರರ ವಿರುದ್ಧ 57 ಗಂಟೆಗಳಿಂದ ಕಾರ್ಯಾಚರಣೆ ಪ್ರಗತಿಯಲ್ಲಿಗೆ. ಕಾರ್ಯಾಚರಣೆಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ. ಆದರೆ, ಎನ್ ಕೌಂಟರ್ ಅಂತ್ಯಗೊಳ್ಳಲು ಕಾಲಾವಕಾಶಬೇಕಿದೆ ಎಂದು ಹೇಳಿದ್ದಾರೆ. 
ಪ್ರಸ್ತುತ ಇಬ್ಬರು ಉಗ್ರರು ಅಡಗಿಕುಳಿತಿರುವುದಾಗಿ ಶಂಕೆಗಳು ಮೂಡಿದ್ದು, ಕಾರ್ಯಾಚರಣೆಯನ್ನು ಮುಂದುವರೆಸಲಾಗುತ್ತಿದೆ. ಕಾರ್ಯಾಚರಣೆ ಸರಿಯಾದ ರೀತಿಯಲ್ಲಿ ಸಾಗುತ್ತಿದೆ. ಕಾರ್ಯಾಚರಣೆಯಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಏರ್ ಬೇಸ್ ನೆಲೆಯಲ್ಲಿರುವ ಆಸ್ಪಿಪಾಸ್ತಿಗಳಿಗೆ ಹಾನಿಯಾಗದಂತೆ ಈಗಾಗಲೇ ಕ್ರಮಕೈಗೊಳ್ಳಲಾಗಿದೆ. ವಾಯುನೆಲೆಯಲ್ಲಿ ಹಲವು ಕುಟುಂಬಗಳು ಹಾಗೂ ಶಾಲೆಯಿದೆ. ಈಗಾಗಲೇ ಎಲ್ಲರನ್ನೂ ಸಂರಕ್ಷಿಸಲಾಗಿದೆ. ಕಾರ್ಯಾಚರಣೆಯಲ್ಲಿ ಗೊಂದಲಗಳಿಗೆ ಆಸ್ಪದ ನೀಡುವುದಿಲ್ಲ. ಈಗಾಗಲೇ ನಾಲ್ವರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಉಗ್ರರ ವಿರುದ್ಧದ ಕಾರ್ಯಾಚರಣೆ ಅಂತಿಮ ಘಟ್ಟದಲ್ಲಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com