ಬಿಹಾರ್‌ಗೂ ವ್ಯಾಪಿಸಿದ ಮಾಲ್ಡಾ ಕಿಚ್ಚು

ಹಿಂದೂ ಮಹಾಸಭಾ ನೇತಾರ ಕಮಲೇಶ್ ತಿವಾರಿಯವರ ಅವಹೇಳನಾಕಾರಿ ಭಾಷಣದಿಂದ ರೊಚ್ಚಿಗೆದ್ದು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಮುಸ್ಲಿಂ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಪೂರ್ನಿಯಾ: ಹಿಂದೂ ಮಹಾಸಭಾ ನೇತಾರ ಕಮಲೇಶ್ ತಿವಾರಿಯವರ ಅವಹೇಳನಾಕಾರಿ ಭಾಷಣದಿಂದ ರೊಚ್ಚಿಗೆದ್ದು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಮುಸ್ಲಿಂ ಸಂಘಟನೆಗಳು ನಡೆಸಿದ್ದ ಪ್ರತಿಭಟನೆಯ ಕಿಚ್ಚು ಈಗ ಬಿಹಾರಕ್ಕೂ ವ್ಯಾಪಿಸಿದೆ.
ಬಿಹಾರದಲ್ಲಿ ಆಲ್ ಇಂಡಿಯಾ ಇಸ್ಲಾಮಿಕ್ ಕೌನ್ಸಿಲ್ ತಿವಾರಿ ಹೇಳಿಕೆ ವಿರುದ್ಧ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡಿದ್ದು, ಪ್ರತಿಭಟನಾಕಾರರು ಬೈಸೈ ಪೊಲೀಸ್ ಠಾಣೆ ಮೇಲೆ ದಾಂಧಲೆ ನಡೆಸಿದ್ದಾರೆ.
ಆಗ ಇಲ್ಲಿನ ಪರಿಸ್ಥಿತಿ ಶಾಂತಗೊಂಡಿದೆ ಎಂದು ಪುರ್‌ನಿಯಾ ಜಿಲ್ಲಾ ಮೆಜಿಸ್ಟ್ರೇಟರ್ ಪಂಕಜ್ ಕುಮಾರ್ ಹೇಳಿದ್ದಾರೆ. 
ತಿವಾರಿ ಅವರ ಹೇಳಿಕೆ ವಿರೋಧಿಸಿ ಉತ್ತರಪ್ರದೇಶದ ಕಾನ್ಪುರ್, ಲಕ್ನೋ, ಬರೇಲಿ ಮತ್ತು ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ಹಿಂಸಾಚಾರ ನಡೆದಿತ್ತು.
ಸಮಾಜವಾದಿ ಪಕ್ಷದ ನಾಯಕ ಮತ್ತು ಉತ್ತರ ಪ್ರದೇಶದ ನಗರಾಭಿವೃದ್ಧಿ ಸಚಿವ ಮೊಹಮ್ಮದ್ ಅಜಂ ಖಾನ್ ಆರೆಸ್ಸೆಸ್ಸ್ ನವರು ಸಲಿಂಗಿಗಳು ಎಂದು ಹೇಳಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಕಮಲೇಶ್ ತಿವಾರಿ ಪ್ರವಾದಿ ಮಹಮ್ಮದ್ ಸಲಿಂಗಿ ಎಂದಿದ್ದರು.
ಈ ಹೇಳಿಕೆಯಿಂದ ರೊಚ್ಚಿಗೆದ್ದ ಮುಸ್ಲಿಂ ಸಂಘಟನೆಗಳು ಮಾಲ್ದಾದಲ್ಲಿ ಪೊಲೀಸ್ ಠಾಣೆಗೆ ಬೆಂಕಿ ಇಟ್ಟು, ಇನ್ನಿತರ ವಾಹನಗಳನ್ನು ನಾಶಗೈದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com