ಕಣ್ಮರೆಯಾಗಿರುವ ಐಎಎಫ್ ವಿಮಾನದಲ್ಲಿ ಕರ್ನಾಟಕದ ಯೋಧ

ಬಂಗಾಳಕೊಲ್ಲಿಯಲ್ಲಿ ನಿನ್ನೆ ಕಣ್ಮರೆಯಾಗಿರುವ ಭಾರತೀಯ ವಾಯುಪಡೆಯ ಎಎನ್-32 ಸರಕು ಸಾಗಣೆ ವಿಮಾನದಲ್ಲಿ ಕರ್ನಾಟಕದ ಬೆಳ್ತಂಗಡಿಯ ಯೋಧರೊಬ್ಬರು ಸೇರಿದ್ದಾರೆ.
ಕಣ್ಮರೆಯಾಗಿರುವ ವಿಮಾನದ ಶೋಧದಲ್ಲಿ ತೊಡಗಿರುವ ರಕ್ಷಣಾ ಪಡೆ
ಕಣ್ಮರೆಯಾಗಿರುವ ವಿಮಾನದ ಶೋಧದಲ್ಲಿ ತೊಡಗಿರುವ ರಕ್ಷಣಾ ಪಡೆ
Updated on
ನವದೆಹಲಿ: ಬಂಗಾಳಕೊಲ್ಲಿಯಲ್ಲಿ ನಿನ್ನೆ ಕಣ್ಮರೆಯಾಗಿರುವ ಭಾರತೀಯ ವಾಯುಪಡೆಯ ಎಎನ್-32 ಸರಕು ಸಾಗಣೆ ವಿಮಾನದಲ್ಲಿ ಕರ್ನಾಟಕದ ಬೆಳ್ತಂಗಡಿಯ ಸೇನಾಧಿಕಾರಿಯೊಬ್ಬರು ಸೇರಿದ್ದಾರೆ.
ಚೆನ್ನೈನ ತಾಂಬರಂ ವಾಯು ಸೇನೆ ನಿಲ್ದಾಣದಿಂದ ಪೋರ್ಟ್ ಬ್ಲೇರ್ ಗೆ ಪಯಣಿಸುತ್ತಿದ್ದ ವಿಮಾನದಲ್ಲಿ 29 ಮಂದಿ ಇದ್ದರು. ಇದರಲ್ಲಿ ಆರು ಮಂದಿ ವಿಮಾನ ಸಿಬ್ಬಂದಿ, 11 ವಾಯು ಪಡೆ ಸಿಬ್ಬಂದಿ, ಇಬ್ಬರು ಭೂ ಸೇನೆ ಯೋಧರು, ಒಬ್ಬ ಕರಾವಳಿ ರಕ್ಷಣಾ ಪಡೆಯ ನಾವಿಕ, ಓರ್ವ ನಾವಿಕ ಮತ್ತು ಎಂಟು ಮಂದಿ ನೌಕಾ ಪಡೆ ಸಿಬ್ಬಂದಿ ಇದ್ದರು ಎಂದು ವಾಯು ಪಡೆಯ ವಕ್ತಾರರು ಮಾಹಿತಿ ನೀಡಿದ್ದಾರೆ. 
ಕಣ್ಮರೆಯಾಗಿರುವ ವಿಮಾನದಲ್ಲಿ ಬೆಳ್ತಂಗಡಿ ಗುರುವಾಯನಕೆರೆಯ ಭಾರತೀಯ ಸೇನೆಯ ಅಧಿಕಾರಿ ಏಕನಾಥ ಶೆಟ್ಟಿ ಸಹ ಇದ್ದರು. ಕಣ್ಮರೆಯಾಗಿರುವ ವಿಮಾನದ ಪತ್ತೆಗಾಗಿ ವಾಯುಪಡೆ, ನೌಕಾಪಡೆ, ಕರಾವಳಿ ರಕ್ಷಣಾ ಪಡೆಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com