ನವದೆಹಲಿ: ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ನಕಲಿ ಎನ್ ಕೌಂಟರ್ ಪ್ರಕರಣದಲ್ಲಿ ಅಮಿತ್ ಶಾ ಗೆ ಕ್ಲಿನ್ ಚಿಟ್ ನೀಡಿರುವ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಾಜಿ ಅಧಿಕಾರಿ ಹರ್ಷ ಮಂದೀರ್ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಈ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್ ನ ನ್ಯಾ.ಎಸ್ ಎ ಬೋಬ್ಡೆ ಹಾಗು ನ್ಯಾ. ಅಶೋಕ್ ಭೂಷಣ್ ಅವರ ವಿಭಾಗೀಯ ಪೀಠ, ನಿಜವಾಗಿಯೂ ಅನ್ಯಾಯಕ್ಕೊಳಗಾದ ವ್ಯಕ್ತಿ ಕೋರ್ಟ್ ಮೆಟ್ಟಿಲು ಹತ್ತಿದರೆ ಅದರ ಪರಿಸ್ಥಿತಿ ಬದಲಾಗುತ್ತದೆ. ಅದೇ ಮತ್ತೋರ್ವ ವ್ಯಕ್ತಿ ಸಂಬಂಧವೇ ಇಲ್ಲದೆ ಕೋರ್ಟ್ ಮೆಟ್ಟಿಲು ಹತ್ತಿದರೆ ಅದಕ್ಕೆ ಬೇರೆ ಆಯಾಮ ಸಿಗುತ್ತದೆ ಎಂದು ಹೇಳಿದೆ.
Advertisement