ತಮಿಳುನಾಡಿನಲ್ಲಿ ನರಭಕ್ಷಕ ಹುಲಿ ಸಾವು

ನೀಲ್ ಗಿರೀಸ್ ನ ದೇವಶೋಲಾ ಎಂಬಲ್ಲಿ ನರ ಭಕ್ಷಕ ಹುಲಿ ಜಾಡು ಹಿಡಿದು ಅದನ್ನು ಹೊಡೆದುರುಳಿಸುವಲ್ಲಿ ವಿಶೇಷ...
ಗುಂಡೇಟಿಗೆ ಮೃತಪಟ್ಟ ನರಭಕ್ಷಕ ಹುಲಿ
ಗುಂಡೇಟಿಗೆ ಮೃತಪಟ್ಟ ನರಭಕ್ಷಕ ಹುಲಿ
ಕೊಯಂಬತ್ತೂರ್: ನೀಲ್ ಗಿರೀಸ್ ನ ದೇವಶೋಲಾ ಎಂಬಲ್ಲಿ ನರ ಭಕ್ಷಕ ಹುಲಿ ಜಾಡು ಹಿಡಿದು ಅದನ್ನು ಹೊಡೆದುರುಳಿಸುವಲ್ಲಿ ವಿಶೇಷ ಕಾರ್ಯಪಡೆ(ಎಸ್ ಟಿಎಫ್) ಯಶಸ್ವಿಯಾಗಿದೆ.
ಶನಿವಾರ ಎಸ್ಟೇಟ್ ವೊಂದರಲ್ಲಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವ್ಯಕ್ತಿಯನ್ನು ಹುಲಿ ಕೊಂದಿತ್ತು. ಈ ಸಂಬಂಧ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.
ನರಭಕ್ಷಕ ಹುಲಿಯನ್ನು ಸೆರೆಯಿಡಿಯಲು ವಿಶೇಷ ಕಾರ್ಯಪಡೆ(ಎಸ್ ಟಿಎಫ್)ನ್ನು ರಚಿಸಲಾಗಿತ್ತು. ಹುಲಿಯ ಹೆಜ್ಜೆಯ ಗುರುತುಗಳ ಜಾಡನ್ನು ಹಿಡಿದು ಹೋಗುತ್ತಿರಬೇಕಾದರೆ, ಎಸ್ ಟಿಎಫ್ ನ ಇಬ್ಬರು ಸಿಬ್ಬಂದಿ ಮೇಲೆ ಹುಲಿ ದಾಳಿ ಮಾಡಿದೆ. ರಕ್ಷಣೆಗಾಗಿ ತಕ್ಷಣ ಹುಲಿಯ ಮೇಲೆ ಗುಂಡು ಹಾರಿಸಲಾಗಿದೆ. ಹುಲಿಯು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com