ಗಾಂಧಿ ಭಾರತದಲ್ಲಿ ಗೋಡ್ಸೆ ದೇವಾಲಯ ನಿರ್ಮಾಣ ಸಾಧ್ಯವಿಲ್ಲ: ಕನ್ಹಯ್ಯಾ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ ಜವಾಹಾರ್ ಲಾಲ್ ನೆಹರು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್...
ಕನ್ಹಯ್ಯಾ ಕುಮಾರ್
ಕನ್ಹಯ್ಯಾ ಕುಮಾರ್
Updated on
ಹೈದ್ರಾಬಾದ್: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ಧಾಳಿ ನಡೆಸಿದ ಜವಾಹಾರ್ ಲಾಲ್ ನೆಹರು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್, ಇದು ಗಾಂಧಿ ದೇಶ, ಇಲ್ಲಿ ನಾಥುರಾಮ್ ಗೋಡ್ಸೆ ದೇವಾಲಯ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 
ಹೈದ್ರಾಬಾದ್ ನ ಸುಂದರಯ್ಯ ವಿಜ್ಞಾನ ಭವನದಲ್ಲಿ ಸಂವಿಧಾನ, ಹಕ್ಕುಗಳ ರಕ್ಷಣೆ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ಹಯ್ಯಾ, ಇದು ಮಹಾತ್ಮಾ ಗಾಂಧಿ ಮತ್ತು ಭಗತ್ ಸಿಂಗ್ ಅವರ ದೇಶ. ಇಂತಹವರ ದೇಶದಲ್ಲಿ ಗೋಡ್ಸೆ ದೇವಾಲಯ ನಿರ್ಮಾಣ ಸಾಧ್ಯವಿಲ್ಲ ಎಂದು ಹೇಳಿ ಬಿಜೆಪಿ ಮತ್ತು ಆರ್ ಎಸ್ ಎಸ್ ವಿರುದ್ಧ ಕಿಡಿ ಕಾರಿದ್ದಾರೆ. 
ನಾನು ಭಾರತ ಮಾತೆಗೆ ಗೌರವ ಸೂಚಿಸುತ್ತೇನೆ. ಆದರೆ, ನನ್ನ ಭಾರತ ಮಾತೆ ಬಿಜೆಪಿ ಭಾರತ ಮಾತೆಗಿಂತ ವಿಭಿನ್ನ. ದೇಶದ ಪ್ರತಿಯೊಬ್ಬ ಮಹಿಳೆಯಲ್ಲಿ ಭಾರತ ಮಾತೆಯನ್ನು ಕಾಣುತ್ತೇನೆ. ಕೃಷಿಗಾಗಿ ದುಡಿಯುವ ಮಹಿಳೆಯಲ್ಲಿ, ಶಿಕ್ಷಕಿಯಲ್ಲಿ ಭಾರತಮಾತೆಯನ್ನು ಕಾಣುತ್ತೇನೆ. ನನ್ನ ಭಾರತ ಮಾತೆ ಬಡವಳು, ನಿಶಕ್ತಳು ಹಾಗೂ ಹಸಿವಿನಿಂದ ಕೂಡಿರುವವಳು ಎಂದು ಕನ್ಹಯ್ಯಾ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com