ತಮ್ಮ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿದ್ದ ವಿವಿಯ ತೀರ್ಮಾನವನ್ನು ಪ್ರಶ್ನಿಸಿ ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡಸಿದ ಮನಮೋಹನ್ ಅವರು ಶಿಸ್ತು ಕ್ರಮಕ್ಕೆ ತಡೆ ನೀಡಿದ್ದು, ಮೇ 13ರಂದು ಕನ್ಹಯ್ಯಾಗೆ ನೀಡಿದ ಆದೇಶವನ್ನು ಇವರಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದಾರೆ.