ಬಸ್ತಾರ್ ನಲ್ಲಿ 40 ನಕ್ಸಲರ ಶರಣಾಗತಿ

ಒಂಬತ್ತು ಮಹಿಳೆಯರೂ ಸೇರಿದಂತೆ 40 ನಕ್ಸಲೀಯರು ಬಸ್ತಾರ್ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ರಾಯಪುರ: ಒಂಬತ್ತು ಮಹಿಳೆಯರೂ ಸೇರಿದಂತೆ 40 ನಕ್ಸಲೀಯರು ಬಸ್ತಾರ್ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾರೆ.

ನಕ್ಸಲ್ ಪೀಡಿತ ಪ್ರದೇಶವೆಂದೇ ಕುಖ್ಯಾತವಾದ ಬಸ್ತಾರ್ ಜಿಲ್ಲೆಯಲ್ಲಿ ಶರಣಾಗತರಾಗುವ ನಕ್ಸಲೀಯರ ಪ್ರತಿ ತಲೆಗೆ 8 ಲಕ್ಷ ರೂ. ನೀಡುವುದಾಗಿ ಸರ್ಕಾರ ಘೊಷಣೆ ಮಾಡಿತ್ತು. ಅದರ ಅನ್ವಯ ದರ್ಭಾ ವಿಭಾಗ ಸಮಿತಿ ಮತ್ತು ಪೂರ್ವ ಬಸ್ತಾರ್ ವಿಭಾಗದ ತಲಾ 19 ಮಂದಿ, ಕಂಗೇರ್ ವೇಲಿ ಪ್ರದೇಶದ ಇಬ್ಬರು ನಕ್ಸಲೀಯರು ಪೊಲೀಸರ ಸಮ್ಮುಖ ಹಾಜರಾಗಿ, ಸಮಾಜದ ಮುಖ್ಯ ವಾಹಿನಿಗೆ ಬಂದು ಜೀವನ ನಿರ್ವಹಿಸುವುದಾಗಿ ಘೊಷಣೆ ಮಾಡಿಕೊಂಡಿದ್ದಾರೆ.

ಸುಬ್ಲಿ ಕಶ್ಯಪ್ ಎಂಬ ಯುವತಿ ನೇತೃತ್ವದ ಮಾವೋವಾದಿ ನಕ್ಸಲೀಯರ ಗುಂಪು 2013ರ ವಿಧಾನಸಭಾ ಚುನಾವಣೆ ಸಂದರ್ಭ ಮತಗಟ್ಟೆಯನ್ನು ಆಕ್ರಮಿಸಿ ಚುನಾವಣಾ ಸಾಮಾಗ್ರಿಗಳನ್ನು ಅಪಹರಿಸುವ ಮೂಲಕ ಪ್ರಮುಖ ಅರೋಪಿಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com