ಹೈದರಾಬಾದ್: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಿದ್ದ ಊಟದಲ್ಲಿ ಸತ್ತ ಜಿರಳೆ ಪತ್ತೆಯಾಗಿದೆ.
ಹೈದರಾಬಾದ್ನಿಂದ ನವದೆಹಲಿಮೂಲಕ ಶಿಕಾಗೊಗೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ನಡೆದಿರುವ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ವಿಮಾನಯಾನ ಸಂಸ್ಥೆ ತನಿಖೆಗೆ ಆದೇಶಿಸಿದೆ.
ವಿಮಾನದಲ್ಲಿ ಆಹಾರ ಸರಬರಾಜು ನಿರ್ವಹಿಸುತ್ತಿರುವ ಕೇಟರರ್ಗೂ ತಕ್ಷಣ ನೋಟಿಸ್ ನೀಡಿದೆ. ಸಂತ್ರಸ್ತ ಪ್ರಯಾಣಿಕ ರಾಹುಲ್ ರಘುವಂಶಿ ಅವರು ಊಟದಲ್ಲಿ ಜಿರಳೆ ಇರುವುದನ್ನು ಚಿತ್ರ ಸಮೇತ ಟ್ವೀಟ್ ಮಾಡಿದ್ದಾರೆ.
ಏರ್ ಇಂಡಿಯಾವು ಈ ಪ್ರಮಾದಕ್ಕಾಗಿ ಪ್ರಯಾಣಿಕರಲ್ಲಿ ಕ್ಷಮೆ ಯಾಚಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದೆ. ಜೊತೆಗೆ ಮುಂಬಯಿ ಮೂಲದ ಗೌರಮೇಟ್ ಸಂಸ್ಥೆಗೆ 1 ಲಕ್ಷ ರೂ ದಂಡ ನೀಡಿ ಎಚ್ಚರಿಕೆ ನೀಡಲಾಗಿದೆ.
Advertisement