ವಿಜಯವಾಡ: ಕಮಿಷನ್ ಆಧಾರದ ಮೇಲೆ ಹಳೆ ಮತ್ತು ಹೊಸ ನೋಟುಗಳ ವಿನಿಮಯ ಮಾಡಿಕೊಡುತ್ತಿದ್ದ 17 ಮಂದಿಯ ತಂಡವೊಂದನ್ನು ಆಂಧ್ರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಮಹಿಳೆ ಸೇರಿದಂತೆ 17 ಮಂದಿಯನ್ನು ಬಂಧಿಸಿರುವ ಪೊಲೀಸರು 6 ಲಕ್ಷ0 80 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ.
ಗುಂಟೂರು, ವಿಜಯವಾಡ, ಪಶ್ಚಿಮ ಗೋದಾವರಿ, ಮತ್ತು ಕೃಷ್ಣಾ ಜಿಲ್ಲೆಗಳಲ್ಲಿ ವ್ಯಾಪಾರಿಗಳಿಗೆ ಶೇ.18 ರಿಂದ 20 ರಷ್ಟು ಕಮಿಷನ್ ಆಧಾರದ ಮೇಲೆ ಹಣ ವಿನಿಮಯ ಮಾಡುತ್ತಿದ್ದರೂ ಎಂದು ವಿಜಯವಾಡ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.
ಈ ತಂಡಕ್ಕೆ 7 ವ್ಯಾಪಾರಿಗಳು ಹಣ ವಿನಿಮಯ ಮಾಡಿಕೊಡುವಂತೆ ಸುಮಾರು 6 ಲಕ್ಷದ 80 ಸಾವಿರ ರು ಹಣ ನೀಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಇದರಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Advertisement