ಪಾಕ್ ವಿರುದ್ಧ ಪ್ರತೀಕಾರ: ಮೂವರು ಪಾಕ್ ಸೈನಿಕರ ಹತ್ಯೆ

ಮೂವರು ಯೋಧರನ್ನು ಹತ್ಯೆ ಮಾಡಿ, ಓರ್ವ ಯೋಧನ ಶಿರಚ್ಛೇದ ಮಾಡಿ ತನ್ನ ನೀಚ ಬುದ್ಧಿಯನ್ನು ಪ್ರದರ್ಶಿಸಿದ್ದ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದ್ದು, ಮೂವರು ಪಾಕಿಸ್ತಾನ ಸೈನಿಕರನ್ನು ಹೊಡೆದುರುಳಿಸಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಮೂವರು ಯೋಧರನ್ನು ಹತ್ಯೆ ಮಾಡಿ, ಓರ್ವ ಯೋಧನ ಶಿರಚ್ಛೇದ ಮಾಡಿ ತನ್ನ ನೀಚ ಬುದ್ಧಿಯನ್ನು ಪ್ರದರ್ಶಿಸಿದ್ದ ಪಾಕಿಸ್ತಾನದ ವಿರುದ್ಧ ಭಾರತೀಯ ಸೇನೆ ಪ್ರತೀಕಾರ ತೀರಿಸಿಕೊಂಡಿದ್ದು, ಮೂವರು ಪಾಕಿಸ್ತಾನ ಸೈನಿಕರನ್ನು ಹೊಡೆದುರುಳಿಸಿದೆ.

ಯೋಧನ ಶಿರಚ್ಛೇದ ಮಾಡುವ ಮೂಲಕ ವಿಕೃತಿ ಮೆರಿದಿದ್ದ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಮಂಗಳವಾರ ತಡರಾತ್ರಿಯಿಂದಲೇ ಜಮ್ಮು ಮತ್ತು ಕಾಶ್ಮೀರದ ಮುಚ್ಚಲ್ ಪ್ರಾಂತ್ಯದಲ್ಲಿ ಭಾರೀ ಗುಂಡಿನ ದಾಳಿ ನಡೆಸಿತ್ತು. ಪಾಕಿಸ್ತಾನದ ಗಡಿ ಪ್ರದೇಶದ ಸೇನಾ ನೆಲೆಗಳು, ಠಾಣೆಗಳು ಮತ್ತು ಶಿಬಿರಗಳನ್ನು ಗುರಿಯಾಗಿರಿಸಿಕೊಂಡು ನಡೆದಿ ಶೆಲ್ ದಾಳಿಗೆ ಮೂವರು ಪಾಕಿಸ್ತಾನ ಸೈನಿಕರು ಸಾವನ್ನಪ್ಪಿದ್ದಾರೆಂದು ಡಾನ್ ವರದಿ ಮಾಡಿದೆ.

ಈ ಬಗ್ಗೆ ಸ್ವತಃ ಪಾಕಿಸ್ತಾನ ಆಂತರಿಕ ಸೇವಾ ಸಾರ್ವಜನಿಕ ಸಂಪರ್ಕ ಇಲಾಖೆ (ಐಎಸ್'ಪಿಆರ್) ಹೇಳಿಕೊಂಡಿದ್ದು, ಗಡಿ ನಿಯಂತ್ರಣ ರೇಖೆ ಬಳಿ ಭಾರತೀಯ ಸೇನೆ ನಡೆಸಿದ ಶೆಲ್ ದಾಳಿಗೆ ಪಾಕಿಸ್ತಾನದ ಮೂವರು ಸೈನಿಕರು ಸಾವನ್ನಪ್ಪಿದ್ದಾರೆಂದು ತಿಳಿಸಿದೆ.

ಕಾಶ್ಮೀರ ವಿಚಾರ ಕುರಿತಂತೆ ವಿಶ್ವದ ಗಮನವನ್ನು ಬೇರೆಡೆ ಸೆಳೆಯಲು ಭಾರತ ಯತ್ನಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ನಾಗರೀಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಭಾರತ ಗಡಿ ನಿಯಂತ್ರಣ ರೇಖೆ ಬಳಿ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸುತ್ತಿದೆ ಎಂದು ಆರೋಪಿಸಿದೆ.

ಸೈನಿಕರ ಹತ್ಯೆ ಕುರಿತಂತೆ ಡಾನ್ ವರದಿ ಮಾಡಿದ್ದು, ಭಾರತೀಯ ಸೇನೆ ಮೂವರು ಪಾಕಿಸ್ತಾನ ಸೈನಿಕರನ್ನು ಹತ್ಯೆ ಮಾಡಿದ್ದು, ಸಾವನ್ನಪ್ಪಿದ್ದ ಸೈನಿಕರನ್ನು ಕ್ಯಾಪ್ಟನ್ ತೈಮೂರ್ ಅಲಿ ಖಾನ್, ಹವಲ್ದರ್ ಮುಶ್ತಕ್ ಹುಸೇನ್ ಮತ್ತು ಲ್ಯಾನ್ಸ್ ನಾಯ್ಕ್ ಗುಲಾಮ್ ಹುಸೇನ್ ಎಂದು ಗುರ್ತಿಸಲಾಗಿದೆ. ಅಲ್ಲದೆ, ಸಾವನ್ನಪ್ಪಿರುವ ಮೂವರು ಪಾಕಿಸ್ತಾನ ಸೈನಿಕರ ಭಾವಚಿತ್ರಗಳನ್ನು ಐಎಸ್'ಪಿಆರ್ ಬಿಡುಗಡೆ ಮಾಡಿದೆ ಎಂದು ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com