ಅಪಘಾತ: ರಸ್ತೆಗೆ ಅಡ್ಡ ಬಂದ ನಾಯಿ ಉಳಿಸಲು ಹೋಗಿ ಒಂದೇ ಕುಟುಂಬದ ಐವರು ಸಾವು

ರಸ್ತೆಗೆ ಅಡ್ಡ ಬಂದ ಬೀದಿ ನಾಯಿ ಉಳಿಸಲು ಹೋಗಿ ಒಂದೇ ಕುಟುಂಬ ಐವರು ದುರ್ಮರಣವನ್ನಪ್ಪಿರುವ ಘಟನೆಯೊಂದು ಪಂಜಾಬ್ ರಾಜ್ಯದ ಲುಧಿಯಾನಾದಲ್ಲಿ ಬುಧವಾರ ನಡೆದಿದೆ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಲುಧಿಯಾನ: ರಸ್ತೆಗೆ ಅಡ್ಡ ಬಂದ ಬೀದಿ ನಾಯಿ ಉಳಿಸಲು ಹೋಗಿ ಒಂದೇ ಕುಟುಂಬ ಐವರು ದುರ್ಮರಣವನ್ನಪ್ಪಿರುವ ಘಟನೆಯೊಂದು ಪಂಜಾಬ್ ರಾಜ್ಯದ ಲುಧಿಯಾನಾದಲ್ಲಿ ಬುಧವಾರ ನಡೆದಿದೆ.

ಲುಧಿಯಾನಾದ ಗಾಂಧಿನಗರ ನಿವಾಸಿಗಳಾದ ಜ್ಯೋತಿ ಹಾಗೂ ಪರ್ವೀನ್ ಕುಮಾರ್ ಹಾಗೂ ಅವರ ಮೂವರು ಮಕ್ಕಳು ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ.

ಪರ್ವೀನ್ ಕುಮಾರ್ ಅವರು ತಮ್ಮ ಕುಟುಂಬಸ್ಥರೊಂದಿಗೆ ಸಂಗ್ರೂರ್ ಜಿಲ್ಲೆಯಲ್ಲಿರುವ ಸಂಬಂಧಿಕರೊಬ್ಬರ ಮನೆಗೆ ಹೋಗಿ ಬರುತ್ತಿದ್ದರು. ಡೆಹ್ಲೋನ್ ಪ್ರದೇಶಕ್ಕೆ ಬರುತ್ತಿದ್ದಂತೆ ನಾಯಿಯೊಂದು ರಸ್ತೆಗೆ ಅಡ್ಡ ಬಂದಿದೆ. ಈ ವೇಳೆ ನಾಯಿ ಉಳಿಸಲು ಹೋದ ಪರ್ವೀನ್ ಅವರು ಕಾರಿನ ಮೇಲಿದ್ದ ನಿಯಂತ್ರಣವನ್ನು ಕಳೆದುಕೊಂಡಿದ್ದಾರೆ.

ನಂತರ ಡಿವೈಡರ್ ಗೆ ಗುದ್ದಿದ ಕಾರು ನಂತರ ಲುಧಿಯಾನದಿಂದ ಬರುತ್ತಿದ್ದ ಖಾಸಗಿ ಬಸ್ ವೊಂದಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಒಂದೇ ಕುಟುಂಬ ಐವರು ಸಾವನ್ನಪ್ಪಿದ್ದಾರೆಂದು ಪೊಲೀಸ್ ಇನ್ಸ್ ಪೆಕ್ಟರ್ ಅಮನ್ದೀಪ್ ಸಿಂಗ್ ಬ್ರಾರ್ ಅವರು ಹೇಳಿದ್ದಾರೆ. ಮೃತರನ್ನು ಸ್ಥಳೀಯ ಆಸ್ಪತ್ರೆಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com