ಮುಂಬೈ ಸಮೀಪದ ಕಲ್ಯಾಣ್ ನಲ್ಲಿನ ವಿಸರ್ಜನೆಯ ಕೊಳದಲ್ಲಿ ಗಣೇಶ್ ಬಿಡುವ ವೇಳೆ ಪೊಲೀಸ್ ಪೇದೆ ನಿತಿನ್ ದಗೋಡೆ ಅವರನ್ನು ಕಾರ್ಯಕರ್ತನೊಬ್ಬ ನೀರಿನಲ್ಲಿ ಮುಳುಗಿಸಿ ಒತ್ತಿ ಹಿಡಿದಿದ್ದಾನೆ. ಈ ವೇಳೆ ಪೇದೆ ತಮ್ಮ ಜೀವ ಉಳಿಸಿಕೊಳ್ಳಲು ಒದ್ದಾಡಿ ಮೇಲೆ ಬಂದಿದ್ದಾರೆ. ನೀರಿನ ಮೇಲೆ ಬಂದ ಪೇದೆಯನ್ನು ಕಾರ್ಯಕರ್ತ ಅವರ ತಲೆಯನ್ನು ಮತ್ತೆ ನೀರಿನಲ್ಲಿ ಒತ್ತಿದ್ದಾನೆ. ಬಳಿಕ ಆತನಿಂದ ತಪ್ಪಿಸಿಕೊಂಡ ಪೇದೆ ಮತ್ತೆ ನೀರಿನಿಂದ ಮೇಲೆ ಬಂದು ಆತನನ್ನು ದಡಕ್ಕೆ ಎಳೆದುಕೊಂಡು ಬಂದರು.