ಉಗ್ರ ನೆಲೆಗಳ ಮೇಲೆ ಸೀಮಿತ ದಾಳಿ: ಭಾರತೀಯ ಸೇನೆಯನ್ನು ಹೊಗಳಿದ ಗಾಯಕ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯನ್ನು ಇತ್ತೀಚೆಗಷ್ಟೇ ಭಾರತೀಯ ಪೌರತ್ವವನ್ನುಪಡೆದಿದ್ದ ಗಾಯಕ ಅದ್ನಾನಿ ಸಮಿ ಹೊಗಳಿದ್ದಾರೆ...
ಪಾಕಿಸ್ತಾನ ಗಾಯಕ ಅದ್ನಾನ್ ಸಮಿ
ಪಾಕಿಸ್ತಾನ ಗಾಯಕ ಅದ್ನಾನ್ ಸಮಿ
Updated on

ಮುಂಬೈ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯನ್ನು ಇತ್ತೀಚೆಗಷ್ಟೇ ಭಾರತೀಯ ಪೌರತ್ವವನ್ನುಪಡೆದಿದ್ದ ಗಾಯಕ ಅದ್ನಾನಿ ಸಮಿ ಹೊಗಳಿದ್ದಾರೆ.

ಗಡಿಯಲ್ಲಿ ಉಗ್ರರು ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದ್ದರೂ ಇಷ್ಟು ದಿನ ಮೌನವಾಗಿಯೇ ಇದ್ದು, ಶಾಂತಿಯನ್ನು ಕಾಪಾಡಿಕೊಂಡು ಬಂದಿದ್ದ ಭಾರತೀಯ ಸೇನೆ ಭಯೋತ್ಪಾದನೆ ವಿರುದ್ಧ ಸಿಡೆದಿದ್ದಿತ್ತು. ಇದರಂತೆ ಉಗ್ರರ ನೆಲೆಗಳ ಮೇಲೆ ನಡೆಸಲಾದ ಸೀಮಿತ ದಾಳಿಯಲ್ಲಿ ಸುಮಾರು 50 ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿತ್ತು.

ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅದ್ನಾನ್ ಸಮಿ, ಭಾರತ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ದೊಡ್ಡ ಶುಭಾಷಯಗಳನ್ನು ಹೇಳಲು ಇಚ್ಛಿಸುತ್ತೇನೆ. ಫ್ರೌಢತೆ ಹಾಗೂ ಅತ್ಯಂತ ಚಾತುರ್ಯತೆಯಿಂದ ನಮ್ಮ ಸೇನೆ ಉಗ್ರರ ವಿರುದ್ಧ ಯಶಸ್ವಿಯಾಗಿ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com