ತವಂಗ್ ನ ಜನರು ಅವರನ್ನು ಬೋಧನೆ ಮತ್ತು ಆಶೀರ್ವಾದ ನೀಡಲು ಆಹ್ವಾನಿಸಿದ್ದಾರೆ. ಧಾರ್ಮಿಕ ಮುಖಂಡರಾಗಿ ಅವರು ಭೇಟಿ ನೀಡಿದ್ದಾರೆ. ದಲೈಲಾಮಾ ಅವರು ಇಡೀ ವಿಶ್ವಾದ್ಯಂತ ಸಂಚರಿಸಿ ಬೌದ್ದ ತತ್ವಗಳ, ಅಂತರ ಧರ್ಮೀಯ ಸಾಮರಸ್ಯ, ಶಾಂತಿ ಬಗ್ಗೆ ಬೋಧಿಸುತ್ತಾರೆ. ತಮ್ಮ ಅನುಯಾಯಿಗಳಿರುವ ದೇಶಕ್ಕೆ ಹೋಗುವ ಧಾರ್ಮಿಕ ಮುಖಂಡರಿಗೆ ಚೀನಾ ಪ್ರತಿಭಟನೆ ಮಾಡುವುದರಲ್ಲಿ ಕಾರಣವಿಲ್ಲ ಎಂದು ಟಿಬೆಟಿಯನ್ ಸರ್ಕಾರದ ವಕ್ತಾರ ಸೋನಮ್ ದಗ್ಪೊ ಹೇಳಿದ್ದಾರೆ.