ಸಂಬಳ ಕೇಳಿದ್ದಕ್ಕೆ ನೌಕರನನ್ನು ಇರಿದ ಬೇಕರಿ ಮಾಲಿಕ

ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ನೌಕರನೊಬ್ಬನನ್ನು ಬೇಕರಿಯ ಮಾಲಿಕನೇ ಇರಿದಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ.
ಸಂಬಳ ಕೇಳಿದ್ದಕ್ಕೆ ನೌಕರನನ್ನು ಇರಿದ ಬೇಕರಿ ಮಾಲಿಕ
ಮುಜಾಫರ್ ನಗರ: ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ನೌಕರನೊಬ್ಬನನ್ನು ಬೇಕರಿಯ ಮಾಲಿಕನೇ ಇರಿದಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್ ನಗರದಲ್ಲಿ ನಡೆದಿದೆ. 
ಕಳೆದ 4-5 ತಿಂಗಳಿನಿಂದ ವೇತನ ಸಿಗದೇ ಇದ್ದ ಹಿನ್ನೆಲೆಯಲ್ಲಿ ಮಾಲಿಕನ ಬಳಿ ನೌಕರ ವೇತನ ಕೇಳಿದ್ದಾನೆ. ಆದರೆ ಬೇಕರಿ ಮಾಲಿಕ ಹಾಗೂ ಆತನ ಇಬ್ಬರು ಮಕ್ಕಳು ಹರಿತವಾದ ಸಾಧನದಿಂದ ಇರಿದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. 
ಬೇಕರಿ ಮಾಲಿಕ ಹಾಗೂ ಆತನ ಇಬ್ಬರು ಪುತ್ರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com