ಬೆಂಗಳೂರು: ಈ ದೇಶದಲ್ಲಿ ಗೋವುಗಳಿಗೆ ರಕ್ಷಣೆ ಇದೆ. ಆದರೆ, ದೇಶ ಕಾಯುವ ಯೋಧರಿಗೆ ಮಾತ್ರ ರಕ್ಷಣೆಯಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಮಾಜಿ ಸಂಸದೆ ಹಾಗೂ ನಟಿ ರಮ್ಯಾ ಕಿಡಿಕಾರಿದ್ದಾರೆ.
ಬಹುದಿನಗಳ ಕಾಲ ರಾಜಕೀಯ ವಲಯದಿಂದ ಕಾಣೆಯಾಗಿದ್ದ ರಮ್ಯಾ ಅವರು ಮಂಗಳವಾರ ಹಠಾತ್ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತ್ಯಕ್ಷರಾಗಿದ್ದಾರೆ.
ಸುಕ್ಮಾ ದಾಳಿ ಹಾಗೂ ಹಿಂದಿ ಭಾಷೆ ಹೇರಿಕೆ ಕುರಿತಂತೆ ಟ್ವೀಟ್ ಮಾಡಿರುವ ರಮ್ಯಾ, ಕೇಂದ್ರ ಬಗ್ಗೆ ಕಿಡಿ ಕೀರುವ ಮೂಲಕ ಈಗಲೂ ತಮ್ಮ ಮನಸ್ಥಿತಿ ಬಿಜೆಪಿ ವಿರುದ್ಧವಿದೆ ಎಂಬುದನ್ನು ಹಾಗೂ ಕಾಂಗ್ರೆಸ್ ನಲ್ಲಿಯೇ ಮುಂದುವರೆಯುವ ಸಂದೇಶವನ್ನು ರವಾನಿಸಿದ್ದಾರೆ.
ಛತ್ತೀಸ್ಗಢದ ಸುಕ್ಮಾದಲ್ಲಿ ಯೋಧರ ಮೇಲೆ ದಾಳಿ ಮಾಡಿದ್ದ ನಕ್ಸಲರು 25 ಸಿಆರ್'ಪಿಎಫ್ ಯೋಧರನ್ನು ಬಲಿಪಡೆದುಕೊಂಡಿದ್ದರು. ಇದಕ್ಕೆ ತೀವ್ರವಾಗಿ ಆಕ್ರೋಶಭರಿತರಾಗಿರುವ ರಮ್ಯಾ, ದೇಶದಲ್ಲಿ ಸಾಮಾನ್ಯ ನಾಗರಿಕರಿಗೆ, ಯೋಧರಿಗೆ ಭದ್ರತೆ ಇಲ್ಲ. ಕೇವಲ ಗೋವುಗಳಿಗೆ ಮಾತ್ರ ಎಂದು ಹೇಳಿದ್ದಾರೆ.