ಶಹರಾಣಾಪುರ್: ಭಾರತದ ಮಾರುಕಟ್ಟೆಯಿಂದ ಮುಂದಿನ 5 ವರ್ಷಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳನ್ನು ದೇಶದಿಂದ ಹೊರ ಓಡಿಸಲಾಗುತ್ತದೆ ಎಂದು ಯೋಗಗುರು ಬಾಬಾ ರಾಮ ದೇವ್ ಹೇಳಿದ್ದಾರೆ.
ಯೋಗಿ ಭರತ ಭೂಷಣ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಬಾಬಾ ರಾಮ್ ದೇವ್, ವಿದೇಶಿ ಕಂಪನಿಗಳನ್ನು ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿದ್ದಾರೆ. ಈ ವಿದೇಶಿ ಕಂಪನಿಗಳು ಭಾರತಕ್ಕೆ ಕಾಲಿಟ್ಟಿರುವುದು ದೇಶವನ್ನು ಲೂಟಿ ಮಾಡಲು ಎಂದು ಆರೋಪಿಸಿದ್ದಾರೆ. ಅಂಥ ಕಂಪನಿಗಳನ್ನು ಇಲ್ಲಿಂದ ಓಡಿಸಿ ಭಾರತವನ್ನು ಎಂಎನ್ ಸಿ ಕಂಪನಿಗಳಿಂದ ಮುಕ್ತವಾದ ರಾಷ್ಟ್ರವನ್ನಾಗಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಈ ವಿದೇಶಿ ಕಂಪನಿಗಳು ನಮ್ಮ ದೇಶವನ್ನು ಅಭಿವೃದ್ಧಿಗೊಳಿಸಲು ಬಂದಿಲ್ಲ, ಬದಲಾಗಿ ಲೂಟಿ ಮಾಡುತ್ತಿವೆ ಎಂದು ದೂರಿದ್ದಾರೆ. ಮುಂದಿನ ಐದು ವರ್ಷಗಳಲ್ಲಿ, ಹೊಸ ತಂತ್ರಜ್ಞಾನ ಬಳಸಿ ಹೇಗೆ ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದನೆ ಮಾಡಬೇಕು ಎಂಬುದರ ಬಗ್ಗೆ ರೈತರಿಗೆ ತರಬೇತಿ ನೀಡಲಾಗುವುದು ಎಂದರು.