ರಾಹುಲ್ ಗಾಂಧಿ ಮೇಲಿನ ದಾಳಿ: ಮೋದಿ, ಷಾ ಗೆ ಬಳೆ ಕಳಿಸಿಕೊಡಲಿರುವ ಕಾಂಗ್ರೆಸ್ ಮಹಿಳಾ ಘಟಕ

ಪ್ರವಾಹ ಎದುರಿಸುತ್ತಿರುವ ಗುಜರಾತ್ ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕಾರಿನ ಮೇಲೆ ದಾಳಿ ನಡೆಸಿದ್ದನ್ನು ಖಂಡಿಸಿರುವ ಕಾಂಗ್ರೆಸ್ ನ ಮಹಿಳಾ ಘಟಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ
ನರೇಂದ್ರ ಮೋದಿ-ಅಮಿತ್ ಶಾ
ನರೇಂದ್ರ ಮೋದಿ-ಅಮಿತ್ ಶಾ
Updated on
ಪಣಜಿ: ಪ್ರವಾಹ ಎದುರಿಸುತ್ತಿರುವ ಗುಜರಾತ್ ಗೆ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಕಾರಿನ ಮೇಲೆ ದಾಳಿ ನಡೆಸಿದ್ದನ್ನು ಖಂಡಿಸಿರುವ ಕಾಂಗ್ರೆಸ್ ನ ಮಹಿಳಾ ಘಟಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರಿಗೆ ಬಳೆಗಳನ್ನು ಕಳಿಸಿಕೊಡಲು ತೀರ್ಮಾನಿಸಿದೆ. 

ರಾಹುಲ್ ಗಾಂಧಿ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ವ್ಯಕ್ತಿ ಬಿಜೆಪಿ ಯುವಮೋರ್ಚಾದ ನಾಯಕ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಮಹಿಳಾ ಮೋರ್ಚ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ ಕಲ್ಲು ತೂರಾಟ ನಡೆಸಿದವರಿಗೆ ಬಳೆಗಳ ಬಾಕ್ಸ್ ನ್ನು ಕಳಿಸಿಕೊಡಲಿದೆ ಎಂದು ಮಹಿಳಾ ಮೋರ್ಚಾದ ಅಧ್ಯಕ್ಷೆ ಪ್ರತಿಮಾ ಹೇಳಿದ್ದಾರೆ. 

ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳಲು ತೆರಳಿದ್ದ ವ್ಯಕ್ತಿಯ ಕಾರ್ ಮೇಲೆ ಕಲ್ಲು ತೂರಾಟ ನಡೆಸುವುದು ಹೇಡಿಗಳ ಲಕ್ಷಣ, ಆದ್ದರಿಂದ ನಾವು ಕಲ್ಲು ತೂರಾಟ ನಡೆಸಿದವರಿಗೂ ಬಳೆಗಳ ಬಾಕ್ಸ್ ನ್ನು ಕಳಿಸಿಕೊಡಲಿದ್ದೇವೆ ಎಂದು ಪ್ರತಿಮಾ ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com