ರಾಹುಲ್ ಗಾಂಧಿ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ವ್ಯಕ್ತಿ ಬಿಜೆಪಿ ಯುವಮೋರ್ಚಾದ ನಾಯಕ ಎನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನ ಮಹಿಳಾ ಮೋರ್ಚ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಹಾಗೂ ಕಲ್ಲು ತೂರಾಟ ನಡೆಸಿದವರಿಗೆ ಬಳೆಗಳ ಬಾಕ್ಸ್ ನ್ನು ಕಳಿಸಿಕೊಡಲಿದೆ ಎಂದು ಮಹಿಳಾ ಮೋರ್ಚಾದ ಅಧ್ಯಕ್ಷೆ ಪ್ರತಿಮಾ ಹೇಳಿದ್ದಾರೆ.
ಪ್ರವಾಹ ಸಂತ್ರಸ್ತರಿಗೆ ಸಾಂತ್ವನ ಹೇಳಲು ತೆರಳಿದ್ದ ವ್ಯಕ್ತಿಯ ಕಾರ್ ಮೇಲೆ ಕಲ್ಲು ತೂರಾಟ ನಡೆಸುವುದು ಹೇಡಿಗಳ ಲಕ್ಷಣ, ಆದ್ದರಿಂದ ನಾವು ಕಲ್ಲು ತೂರಾಟ ನಡೆಸಿದವರಿಗೂ ಬಳೆಗಳ ಬಾಕ್ಸ್ ನ್ನು ಕಳಿಸಿಕೊಡಲಿದ್ದೇವೆ ಎಂದು ಪ್ರತಿಮಾ ತಿಳಿಸಿದ್ದಾರೆ.