ಬಾಬಾ ರಾಮ್ ದೇವ್
ಬಾಬಾ ರಾಮ್ ದೇವ್

ಚೀನಾದೊಂದಿಗಿನ ಯುದ್ಧಕ್ಕೆ ಭಾರತ ಸಿದ್ಧವಾಗಿರಬೇಕು: ಬಾಬಾ ರಾಮ್ ದೇವ್

ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ-ಚೀನಾದ ಸಂಬಂಧ ಹದಗೆಡುತ್ತಿದ್ದು, ಭಾರತ ಚೀನಾದೊಂದಿಗಿನ ಯುದ್ಧಕ್ಕೆ ಸಿದ್ಧವಾಗಿರಬೇಕು ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
ಮುಂಬೈ: ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಭಾರತ-ಚೀನಾದ ಸಂಬಂಧ ಹದಗೆಡುತ್ತಿದ್ದು, ಭಾರತ ಚೀನಾದೊಂದಿಗಿನ ಯುದ್ಧಕ್ಕೆ ಸಿದ್ಧವಾಗಿರಬೇಕು ಎಂದು ಯೋಗ ಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ. 
ಆ.13 ರಂದು ವರ್ಲ್ಡ್ ಪೀಸ್, ಹಾರ್ಮೊನಿ ಕಾನ್ಕ್ಲೇವ್ ನ್ನು ಉದ್ದೇಶಿಸಿ ಮಾತನಾಡಿರುವ ಯೋಗ ಗುರು ಬಾಬಾ ರಾಮ್ ದೇವ್,  ಚೀನಾ ಒಂದು ವೇಳೆ ಶಾಂತಿ ಮಾತುಕತೆಗೆ ಮುಕ್ತವಾಗಿದ್ದರೆ ದಲೈ ಲಾಮ ಇಲ್ಲಿರುತ್ತಿರಲಿಲ್ಲ. ಭಾರತ ಶಾಂತಿಯುತ ಮಾತುಕತೆ ಬಗ್ಗೆ ಮಾತನಾಡಿದಾಗಲೆಲ್ಲಾ ಚೀನಾ ಯುದ್ಧದ ಬೆದರಿಕೆ ಹಾಕಿದೆ, ಅಷ್ಟೇ ಅಲ್ಲದೇ ಅದೇ ರೀತಿಯಲ್ಲಿ ಪ್ರತಿಕ್ರಿಯೆ ನೀಡಲು ಭಾರತವನ್ನು ಕೇಳಿದೆ ಎಂದು ರಾಮ್ ದೇವ್ ಹೇಳಿದ್ದಾರೆ. 
ಚೀನಾ ಯುದ್ಧ ಹಾಗೂ ದ್ವೇಷವನ್ನು ಹರಡುತ್ತಿದೆ. ಆದ್ದರಿಂದ ಭಾರತ ಚೀನಾದೊಂದಿಗಿನ ಯುದ್ಧಕ್ಕೆ ಸಿದ್ಧವಾಗಿರಬೇಕೆಂದು ಬಾಬಾ ರಾಮ್ ದೇವ್ ಅಭಿಪ್ರಾಯಪಟ್ಟಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com