ಇದೇ ವೇಳೆ ಜಿಲ್ಲಾಧಿಕಾರಿಗಳ ವಿರುದ್ಧ ಕಿಡಿಕಾರಿರುವ ಅವರು, ತೇಜಸ್ವಿ ಯಾದವ್ ಅವರು ಹೋಗಿದ್ದ ರಸ್ತೆಯಲ್ಲಿಯೇ ಸುಶೀಲ್ ಕುಮಾರ್ ಮೋದಿಯವರನ್ನೇಕೆ ಅಧಿಕಾರಿಗಳು ಕರೆದುಕೊಂಡು ಹೋಗಿದ್ದರು? ಪರ್ಯಾಯ ರಸ್ತೆಗಳನ್ನು ಬಳಕೆ ಮಾಡಿಕೊಂಡು ಕರೆದುಕೊಂಡು ಹೋಗಬಹುದಿತ್ತು. ಹಗರಣಗಳಲ್ಲಿ ಸುಶೀಲ್ ಕುಮಾರ್ ಮೋದಿಯವರ ಹೆಸರು ಕೇಳಿಬಂದಿದ್ದು, ಇದೀಗ ಜನರ ಗಮನವನ್ನು ಬೇರೆಡೆ ಸೆಳೆಯುವ ಸಲವಾಗಿ ಈ ರೀತಿಯ ಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.