ಉಗ್ರರಿಗೆ ಆರ್ಥಿಕ ನೆರವು: ಗಿಲಾನಿ ಪುತ್ರನಿಗೆ ಸಮನ್ಸ್ ಜಾರಿ ಮಾಡಿದ ಎನ್ಐಎ

ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸುವ ಸಲುವಾಗಿ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯತ್ ಪ್ರತ್ಯೇಕತಾವಾದಿ ಸೈಯ್ಯದ್ ಅಲಿ ಶಾ ಗಿಲಾನಿಯವರ ಪುತ್ರನಿಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶನಿವಾರ...
ಹುರಿಯತ್ ಪ್ರತ್ಯೇಕತಾವಾದಿ ಸೈಯ್ಯದ್ ಅಲಿ ಶಾ ಗಿಲಾನಿ
ಹುರಿಯತ್ ಪ್ರತ್ಯೇಕತಾವಾದಿ ಸೈಯ್ಯದ್ ಅಲಿ ಶಾ ಗಿಲಾನಿ
ನವದೆಹಲಿ: ಕಾಶ್ಮೀರದಲ್ಲಿ ಹಿಂಸಾಚಾರ ಸೃಷ್ಟಿಸುವ ಸಲುವಾಗಿ ಉಗ್ರರಿಗೆ ಆರ್ಥಿಕ ನೆರವು ನೀಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹುರಿಯತ್ ಪ್ರತ್ಯೇಕತಾವಾದಿ ಸೈಯ್ಯದ್ ಅಲಿ ಶಾ ಗಿಲಾನಿಯವರ ಪುತ್ರನಿಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶನಿವಾರ ಸಮನ್ಸ್ ಜಾರಿ ಮಾಡಿದ್ದಾರೆಂದು ತಿಳಿದುಬಂದಿದೆ. 
ಗಿಲಾನಿಯವರ ಪುತ್ರ ನಸೀಮ್ ಗಿಲಾನಿಯವರಿಗೆ ಎನ್ಐಎ ಅಧಿಕಾರಿಗಳು ಸಮನ್ಸ್ ಮಾಡಿದ್ದು, ಪ್ರಕರಣ ಸಂಬಂಧ ವಿಚಾರಣೆ ನಡೆಸುವ ಅಗತ್ಯವಿದ್ದು, ವಿಚಾರಣೆಗಾಗಿ ದೆಹಲಿಗೆ ಆಗಮಿಸುವಂತೆ ಸೂಚಿಸಿದ್ದಾರೆಂದು ವರದಿಗಳು ತಿಳಿಸಿವೆ. 
ನಸೀಮ್ ಶ್ರೀನಗರದಲ್ಲಿರುವ ಶೆರ್-ಇ-ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 
ಸಮನ್ಸ್ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಎನ್ಐಎ ಅಧಿಕಾರಿಗಳು, ಗಿಲಾನಿ ಪುತ್ರ ನಸೀಮ್ ಗಿಲಾನಿಯವರಿಗೆ ನಾವು ಸಮನ್ಸ್ ಜಾರಿದ್ದು, ಮುಂದಿನ ವಾರ ದೆಹಲಿಯಲ್ಲಿರುವ ಎನ್ಐಎ ಪ್ರಧಾನ ಕಚೇರಿಗೆ ಆಗಮಿಸುವಂತೆ ಸೂಚಿಸಿದ್ದೇವೆಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com