ಎಂಇಎ ವಕ್ತಾರ ವಿಕಾಸ್ ಸ್ವರೂಪ್ ಕೆನಡಾದ ನೂತನ ಭಾರತೀಯ ರಾಯಭಾರಿ

ವಿದೇಶಾಂಗ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ಅವರನ್ನು ಭಾರತ ಸರ್ಕಾರ ಕೆನಡಾದ ನೂತನ ಭಾರತೀಯ ರಾಯಭಾರಿಯನ್ನಾಗಿ ನೇಮಿಸಿದೆ.
ವಿಕಾಸ್ ಸ್ವರೂಪ್
ವಿಕಾಸ್ ಸ್ವರೂಪ್
ನವದೆಹಲಿ: ವಿದೇಶಾಂಗ ಇಲಾಖೆಯ ವಕ್ತಾರ ವಿಕಾಸ್ ಸ್ವರೂಪ್ ಅವರನ್ನು ಭಾರತ ಸರ್ಕಾರ ಕೆನಡಾದ ನೂತನ ಭಾರತೀಯ ರಾಯಭಾರಿಯನ್ನಾಗಿ ನೇಮಿಸಿದೆ. 
1986 ರ ಬ್ಯಾಚ್ ನ ಐಎಫ್ಎಸ್ ಸೇವೆಯ ಅಧಿಕಾರಿ ಪ್ರಸ್ತುತ ಹೆಚ್ಚುವರಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಹೊಸ ಜವಾಬ್ದಾರಿಯನ್ನು ಶೀಘ್ರವೇ ವಹಿಸಿಕೊಳ್ಳಲಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 
ಅರುಣ್ ಕುಮಾರ್ ಸಾಹು ಕೆನಡಾದ ಹಂಗಾಮಿ ಭಾರತೀಯ ರಾಯಭಾರಿಯಾಗಿದ್ದು, ಅವರ ಸ್ಥಾನಕ್ಕೆ ವಿಕಾಸ್ ಸ್ವರೂಪ್ ನೇಮಕಗೊಂಡಿದ್ದಾರೆ. ವಿಕಾಸ್ ಸ್ವರೂಪ್ ಅವರ ಕ್ಯೂ&ಎ ಕಾದಂಬರಿ ಅಪಾರ ಜನಮನ್ನಣೆ ಗಳಿಸಿದ್ದು, ಸ್ಲಂ ಡಾಗ್ ಮಿಲೆನಿಯರ್ ಚಿತ್ರಕ್ಕೂ ಈ ಕಾದಂಬರಿಯನ್ನು ಅಳವಡಿಸಿಕೊಳ್ಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com