ಉಗ್ರರ ದಾಳಿಯಿಂದ ಕಾಶ್ಮೀರ ಪಂಡಿತರು ಕಾಶ್ಮೀರವನ್ನು ತೊರೆದರು, ಅದರ ಪರಿಣಾಮವೆಂಬಂತೆ ಇಂದಿಗೂ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಶ್ರೇಷ್ಠ ಗುರುಗಳಾಗಿದ್ದ ಕಾಶ್ಮೀರಿ ಪಂಡಿತರು ತಮ್ಮ ಕಲಿಕೆಯನ್ನು ಜಮ್ಮುವಿನ ಜನತೆಯಲ್ಲಿ ತುಂಬಿದ್ದರು, ಆದರೆ ಕಾಶ್ಮೀರ ಕಣಿವೆ ಮಾತ್ರ ಅಂತಹ ಶ್ರೇಷ್ಠ ವ್ಯಕ್ತಿತ್ವವುಳ್ಳ ಗುರುಗಳನ್ನು ಕಳೆದುಕೊಂಡು ಗುಣಮಟ್ಟದ ಶಿಕ್ಷಣದಿಂದ ವಂಚಿತವಾಗಿದೆ ಎಂದು ಮೆಹಬೂಬಾ ಮುಫ್ತಿ ಬೇಸರ ವ್ಯಕ್ತಪಡಿಸಿದ್ದಾರೆ.