ದೆಹಲಿ ವಿವಿ ಪ್ರತಿಭಟನೆಯಲ್ಲಿ ಆಜಾದ್ ಕಾಶ್ಮೀರ್ ಘೋಷಣೆ!

ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಫೆ.23 ರಂದು ನಡೆದ ಘರ್ಷಣೆ, ಪ್ರತಿಭಟನೆಯ ವೇಳೆ ಆಜಾದ್ ಕಾಶ್ಮೀರ ಘೋಷಣೆ ಕೇಳಿಬಂದಿದೆ.
ದೆಹಲಿ ವಿವಿ ಪ್ರತಿಭಟನೆಯಲ್ಲಿ ಆಜಾದ್ ಕಾಶ್ಮೀರ್ ಘೋಷಣೆ!
ದೆಹಲಿ ವಿವಿ ಪ್ರತಿಭಟನೆಯಲ್ಲಿ ಆಜಾದ್ ಕಾಶ್ಮೀರ್ ಘೋಷಣೆ!
ನವದೆಹಲಿ: ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಫೆ.23 ರಂದು ನಡೆದ ಘರ್ಷಣೆ, ಪ್ರತಿಭಟನೆಯ ವೇಳೆ ಆಜಾದ್ ಕಾಶ್ಮೀರ ಘೋಷಣೆ ಕೇಳಿಬಂದಿದೆ. 
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ವಿಡಿಯೋ ಒಂದು ಹರಿದಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ, ಕಾಶ್ಮೀರಕ್ಕೆ ಸ್ವಾತಂತ್ರ್ಯ ಎಂಬ ಘೋಷಣೆ ಕೂಗುತ್ತಿರುವುದರದನ್ನು ವಿಡಿಯೋ ಬಹಿರಂಗಪಡಿಸಿದೆ. ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದವರ ಮೇಲೆ ಬಿಜೆಪಿಯ ವಿದ್ಯಾರ್ಥಿ ಸಂಘಟನೆಗೆ ಸೇರಿದ ಯುವಕರು ದಾಳಿ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದ್ದು, ಕನಿಷ್ಠ 30 ಜನರು ಘರ್ಷಣೆಯಲ್ಲಿ ಗಾಯಗೂಂಡಿದ್ದಾರೆ ಎನ್ನಲಾಗುತ್ತಿದೆ. 
ದೆಹಲಿ ಪೊಲೀಸರು ಹಲ್ಲೆ, ಘರ್ಷಣೆ ನಡೆದಿರುವ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com