ಶಿವಲಿಂಗಕ್ಕೆ ವಿಸ್ಕಿ ಕುಡಿಸುವ ದೃಶ್ಯ, ತೆಲುಗು ಸಿನಿಮಾ ನಿರ್ದೇಶಕನ ಬಂಧನ

ಸದ್ಯದಲ್ಲೇ ಬಿಡುಗಡೆಯಾಗಲಿರುವ ತೆಲುಗು ಚಿತ್ರವೊಂದರಲ್ಲಿ ಶಿವ ಲಿಂಗಕ್ಕೆ ವಿಸ್ಕಿ ಕುಡಿಸುವ ಹಾಗೂ ದೇವಸ್ಥಾನದಲ್ಲಿ ಅಗರಬತ್ತಿ ಬದಲು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಹೈದರಾಬಾದ್: ಸದ್ಯದಲ್ಲೇ ಬಿಡುಗಡೆಯಾಗಲಿರುವ ತೆಲುಗು ಚಿತ್ರವೊಂದರಲ್ಲಿ ಶಿವ ಲಿಂಗಕ್ಕೆ ವಿಸ್ಕಿ ಕುಡಿಸುವ ಹಾಗೂ ದೇವಸ್ಥಾನದಲ್ಲಿ ಅಗರಬತ್ತಿ ಬದಲು ಸಿಗರೇಟ್ ಹೊತ್ತಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಚಿತ್ರದ ನಿರ್ದೇಶಕರನ್ನು ತೆಲಂಗಾಣ ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಹೊಸ ಕಲಾವಿದರು ಅಭಿನಯಿಸಿರುವ ದೇವುಡ ಚಿತ್ರದಲ್ಲಿ ಈ ದೃಶ್ಯಗಳಿದ್ದು, ಚಿತ್ರದ ನಿರ್ದೇಶಕ ದಾಸರಿ ಸಾಯಿರಾಮ್ ಹಾಗೂ ನಿರ್ಮಾಪಕ ಗಜ್ಜೆಲ ಹರಿ ಕುಮಾರ್ ರೆಡ್ಡಿ ಅವರನ್ನು ಇಂದು ಬಂಧಿಸಲಾಗಿದೆ.
ಶಿವಲಿಂಗಕ್ಕೆ ವಿಸ್ಕಿ ಕುಡಿಸುವ ದೃಶ್ಯ ತೋರಿಸುವ ಮೂಲಕ ಧಾರ್ಮಿಕ ಭಾವನೆಗೆ ಧಕ್ಕೆ ತರಲಾಗಿದೆ ಎಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ನೀಡಿದ್ದ ದೂರಿನ ಆಧಾರದ ಮೇಲೆ ತೆಲಂಗಾಣ ಪೊಲೀಸರು ಆಂಧ್ರಪ್ರದೇಶದ ತೆನಾಲಿ ಮೂಲದ ನಿರ್ದೇಶಕನನ್ನು ಹಾಗೂ ಕಡಪಾ ಮೂಲದ ನಿರ್ಮಾಪಕನನ್ನು ವಶಕ್ಕೆ ಪಡೆದಿದ್ದಾರೆ.
ಈ ಇಬ್ಬರು ಆರೋಪಿಗಳ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com