ಅಧಿಕಾರಿಗಳು ಪಂಜರದ ಪಕ್ಷಿಗಳಿದ್ದಂತೆ: ಉಮಾಭಾರತಿ

ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ, ಅಧಿಕಾರಿಗಳು ಪಂಜರದ ಪಕ್ಷಿಗಳಿದ್ದಂತೆ ಆಕ್ರೋಶ ವ್ಯಕ್ತ ..
ಉಮಾ ಭಾರತಿ
ಉಮಾ ಭಾರತಿ

ಛತ್ತೀಸ್ ಗಡ:  ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಸರ್ಕಾರಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ, ಅಧಿಕಾರಿಗಳು ಪಂಜರದ ಪಕ್ಷಿಗಳಿದ್ದಂತೆ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಛತ್ತೀಸ್ ಗಡದಲ್ಲಿ ರೈತರಿಗೆ ಅಂತರ್ಜಲ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದ ಅವರು ಅಧಿಕಾರಿಗಳ ನಿಷ್ಕ್ರಿಯತೆ ಬಗ್ಗೆ ಕಿಡಿ ಕಾರಿದರು. ಅಧಿಕಾರಿಗಳು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಜಡತ್ವ ಹೊಂದಿದ್ದಾರೆ, ಅಧಿಕಾರಿಗಳು ಅವರ ಪಂಜರದಿಂದ ಹೊರಬರಲು ಪ್ರಯತ್ನಿಸಬೇಕು, ಆದರೆ ಅದನ್ನು ಅವರು ನಿಧಾನವಾಗಿ ಮಾಡುತ್ತಾರೆ ಎಂದು ಕರೆ ತಿಳಿಸಿದ್ದಾರೆ.

ಅಧಿಕಾರಿಗಳು ಬಹು ಬೇಗನೇ ಕೆಲಸಗಳನ್ನು ರದ್ದು ಮಾಡುತ್ತಾರೆ, ಆದರೆ ಅಷ್ಟೇ ಶೀಘ್ರವಾಗಿ ಕೆಲಸಗಳನ್ನು ಅನುಷ್ಠಾನಗೊಳಿಸುವುದಿಲ್ಲ ಎಂದ ಅವರು  ಬೇಗನೆ ಎದ್ದೇಳುವವರು ಹಾಗೂ ತ್ವರಿತವಾಗಿ ಕೆಲಸ ಮಾಡುವವರು 56 ಇಂಚಿನ ಎದೆಗೆ ಅವಶ್ಯಕತೆ ಇದ್ದಾರೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com