'ರಜನಿಕಾಂತ್ 420' ಎಂದು ಸ್ವಾಮಿ ಟ್ವೀಟ್ ಮಾಡಲು ಕಾರಣ ಏನು ಗೊತ್ತೆ!

ದಕ್ಷಿಣ ಭಾರತ ಸೂಪರ್ ಸ್ಟಾರ್ ರಜನಿಕಾಂತ್ ಅವರು 420 ಎಂದು ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ...
ರಜನಿಕಾಂತ್-ಸುಬ್ರಮಣಿಯನ್ ಸ್ವಾಮಿ
ರಜನಿಕಾಂತ್-ಸುಬ್ರಮಣಿಯನ್ ಸ್ವಾಮಿ
ನವದೆಹಲಿ: ದಕ್ಷಿಣ ಭಾರತ ಸೂಪರ್ ಸ್ಟಾರ್ ರಜನಿಕಾಂತ್ ಅವರು 420 ಎಂದು ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. 
ಆರೋಗ್ಯ ತಪಾಸಣೆಗಾಗಿ ರಜನಿಕಾಂತ್ ಅವರು ಜೂನ್ 28ರಂದು ಅಮೆರಿಕ್ಕೆ ತೆರಳಿದ್ದರು. ಈ ವೇಳೆ ಅವರು ಕ್ಯಾಸಿನೋದಲ್ಲಿ ಗ್ಯಾಂಬ್ಲಿಂಗ್ ಆಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ಆರೋಗ್ಯ ಸುಧಾರಿಸಲು ರಜನಿಕಾಂತ್ ಗ್ಯಾಂಬ್ಲಿಂಗ್ ನಡೆಸುತ್ತಿದ್ದಾರಾ? ಅವರು ಗ್ಯಾಂಬ್ಲಿಂಗ್ ಆಡಲು ಡಾಲರ್ ಎಲ್ಲಿಂದ ಬಂತು. ಈ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ಮಾಡಬೇಕು ಎಂದು ಸ್ವಾಮಿ ಟ್ವೀಟಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ರಜನಿಕಾಂತ್ ಅವರು ರಾಜಕೀಯಕ್ಕೆ ಬಂದರೆ ತಮಿಳುನಾಡಿನ ರಾಜಕೀಯವನ್ನು ಹಾಳು ಮಾಡುತ್ತಾರೆ ಎಂದು ಟ್ವೀಟ್ ಮಾಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com