ನವದೆಹಲಿ: ದೆಹಲಿಯ ಬಾಬಾ ಹರಿದಾಸ್ ನಗರದಲ್ಲಿ ಅಕ್ರಮವಾಗಿ ಎಮ್ಮೆ ಮರಿಗಳನ್ನು ಸಾಗಣೆ ಮಾಡುತ್ತಿದ್ದ ಆರು ಮಂದಿಗೆ ಉದ್ರಿಕ್ತ ಗುಂಪೊಂದು ತೀವ್ರವಾಗಿ ಥಳಿಸಿದ್ದಾರೆ.
ಆರು ವಾಹನಗಳಲ್ಲಿ ಎಮ್ಮೆ ಮರಿಗಳನ್ನು ಸಾಗಿಸಲಾಗುತ್ತಿತ್ತು ಈ ಮಾಹಿತಿ ಪಡೆದ ಗುಂಪೊಂದು ವಾಹನಗಳನ್ನು ತಡೆದ ಅದರಲ್ಲಿದ್ದ ಚಾಲಕರನ್ನು ಮನಬಂದಂತೆ ಥಳಿಸಿ ಎಮ್ಮೆ ಮರಿಗಳನ್ನು ಬಿಟ್ಟು ಓಡಿಸಿದ್ದಾರೆ.
ಈ ದಾಳಿಯಲ್ಲಿ ಚಾಲಕ ಅಲಿ ಜಾನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಆತನ ಮಗ ದಾಳಿಕೋರರ ಮೇಲೆ ದೂರು ದಾಖಲಿಸಿದ್ದಾನೆ.
ಇನ್ನು ಜೂನ್ 30ರಂದು ಜಾರ್ಖಂಡ್ ರಾಮಗಢ ನಲ್ಲಿ ಗೋಮಾಂಸವನ್ನು ಹೊತ್ತೊಯ್ಯುತ್ತಿದ್ದಾನೆ ಎಂದು ಆರೋಪಿಸಿ ಗುಂಪೊಂದು ವ್ಯಕ್ತಿ ಮೇಲೆ ಗಂಭೀರ ಹಲ್ಲೆ ಮಾಡಿತ್ತು. ಈ ದಾಳಿಯಲ್ಲಿ ಆತ ಮೃತಪಟ್ಟಿದ್ದ.
ಇತ್ತೀಚೆಗಷ್ಟೆ ಪ್ರಧಾನಿ ಮೋದಿ ಅವರು ಗೋ ರಕ್ಷಣೆ ಹೆಸರಲ್ಲಿ ಗೋರಕ್ಷಕರು ಹಲ್ಲೆ ಮಾಡುವುದು ಸರಿಯಲ್ಲ ಎಂದು ಖಂಡಿಸಿದ್ದರು. ಇದಾದ ಬೆನ್ನಲೇ ಕೆಲ ಕಡೆ ಗೋ ಸಾಗಾಣೆಗಾರರ ಮೇಲೆ ದಾಳಿಗಳು ನಡೆಸುತ್ತಿವೆ.