ದೆಹಲಿಯಲ್ಲಿ ಅಕ್ರಮ ಎಮ್ಮೆ ಸಾಗಾಣೆ: ಉದ್ರಿಕ್ತ ಗುಂಪಿನಿಂದ ಆರು ಮಂದಿಗೆ ಥಳಿತ

ದೆಹಲಿಯ ಬಾಬಾ ಹರಿದಾಸ್ ನಗರದಲ್ಲಿ ಅಕ್ರಮವಾಗಿ ಎಮ್ಮೆ ಮರಿಗಳನ್ನು ಸಾಗಣೆ ಮಾಡುತ್ತಿದ್ದ ಆರು ಮಂದಿಗೆ ಉದ್ರಿಕ್ತ ಗುಂಪೊಂದು ತೀವ್ರವಾಗಿ ಥಳಿಸಿದ್ದಾರೆ...
ಎಮ್ಮೆ ಮರಿ
ಎಮ್ಮೆ ಮರಿ
Updated on
ನವದೆಹಲಿ: ದೆಹಲಿಯ ಬಾಬಾ ಹರಿದಾಸ್ ನಗರದಲ್ಲಿ ಅಕ್ರಮವಾಗಿ ಎಮ್ಮೆ ಮರಿಗಳನ್ನು ಸಾಗಣೆ ಮಾಡುತ್ತಿದ್ದ ಆರು ಮಂದಿಗೆ ಉದ್ರಿಕ್ತ ಗುಂಪೊಂದು ತೀವ್ರವಾಗಿ ಥಳಿಸಿದ್ದಾರೆ. 
ಆರು ವಾಹನಗಳಲ್ಲಿ ಎಮ್ಮೆ ಮರಿಗಳನ್ನು ಸಾಗಿಸಲಾಗುತ್ತಿತ್ತು ಈ ಮಾಹಿತಿ ಪಡೆದ ಗುಂಪೊಂದು ವಾಹನಗಳನ್ನು ತಡೆದ ಅದರಲ್ಲಿದ್ದ ಚಾಲಕರನ್ನು ಮನಬಂದಂತೆ ಥಳಿಸಿ ಎಮ್ಮೆ ಮರಿಗಳನ್ನು ಬಿಟ್ಟು ಓಡಿಸಿದ್ದಾರೆ. 
ಈ ದಾಳಿಯಲ್ಲಿ ಚಾಲಕ ಅಲಿ ಜಾನ್ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು ಆತನ ಮಗ ದಾಳಿಕೋರರ ಮೇಲೆ ದೂರು ದಾಖಲಿಸಿದ್ದಾನೆ. 
ಇನ್ನು ಜೂನ್ 30ರಂದು ಜಾರ್ಖಂಡ್ ರಾಮಗಢ ನಲ್ಲಿ ಗೋಮಾಂಸವನ್ನು ಹೊತ್ತೊಯ್ಯುತ್ತಿದ್ದಾನೆ ಎಂದು ಆರೋಪಿಸಿ ಗುಂಪೊಂದು ವ್ಯಕ್ತಿ ಮೇಲೆ ಗಂಭೀರ ಹಲ್ಲೆ ಮಾಡಿತ್ತು. ಈ ದಾಳಿಯಲ್ಲಿ ಆತ ಮೃತಪಟ್ಟಿದ್ದ. 
ಇತ್ತೀಚೆಗಷ್ಟೆ ಪ್ರಧಾನಿ ಮೋದಿ ಅವರು ಗೋ ರಕ್ಷಣೆ ಹೆಸರಲ್ಲಿ ಗೋರಕ್ಷಕರು ಹಲ್ಲೆ ಮಾಡುವುದು ಸರಿಯಲ್ಲ ಎಂದು ಖಂಡಿಸಿದ್ದರು. ಇದಾದ ಬೆನ್ನಲೇ ಕೆಲ ಕಡೆ ಗೋ ಸಾಗಾಣೆಗಾರರ ಮೇಲೆ ದಾಳಿಗಳು ನಡೆಸುತ್ತಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com