ಲಕ್ನೋ: ಆ ಗ್ರಾಮದಲ್ಲಿ ಮದುವೆ ಸಮಾರಂಭ ನಡೆದು 40 ದಶಕಗಳೇ ಕಳೆದುಹೋಗಿವೆ. ಅದೊಂದು ಸಣ್ಣ ಹಳ್ಳಿ. ಉತ್ತರ ಪ್ರದೇಶದ ಕಾನ್ಪುರದ ಯಮುನಾ ನದಿ ತೀರದಲ್ಲಿರುವ ಮುರಳೀಪುರ ಹಳ್ಳಿಯ ಯುವಕರು ಬ್ರಹ್ಮಚಾರಿಗಳಾಗಿಯೇ ಉಳಿದಿದ್ದಾರೆ. ಇದಕ್ಕೆ ಕಾರಣ ಅಲ್ಲಿನ ಬಡತನ, ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದು. ಪಕ್ಕದ ಹಳ್ಳಿಯ ನಿವಾಸಿಗಳು ತಮ್ಮ ಹೆಣ್ಣು ಮಕ್ಕಳನ್ನು ಈ ಹಳ್ಳಿಯ ಯುವಕರಿಗೆ ಮದುವೆ ಮಾಡಿಕೊಡಲು ಒಪ್ಪುವುದಿಲ್ಲ. ಈ ಹಳ್ಳಿಗೆ ಈಗ ಬ್ರಹ್ಮಚಾರಿಗಳ ಹಳ್ಳಿ ಎಂಬ ಹೆಸರು ಬಂದಿದೆ.