ಜಿಡಿಪಿ ಕುಸಿತ: ಸಿಂಗ್ ಸಲಹೆಯನ್ನು ಟೀಕಿಸಿದ್ದ ಕೇಂದ್ರದ ವಿರುದ್ಧ ಚಿದಂಬರಂ ಕಿಡಿ

2016-17 ನೇ ಸಾಲಿನ ಜಿಡಿಪಿ ಕುಸಿತ ಕಂಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆಗಳನ್ನು ಟೀಕಿಸಿದ್ದ ಕೇಂದ್ರ ಸರ್ಕಾರದ...
ಚಿದಂಬರಂ
ಚಿದಂಬರಂ
ಶಿವಗಂಗಾ (ತಮಿಳುನಾಡು):  2016-17 ನೇ ಸಾಲಿನ ಜಿಡಿಪಿ ಕುಸಿತ ಕಂಡಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಸಲಹೆಗಳನ್ನು ಟೀಕಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 
2016 ರ ಆರ್ಥಿಕ ವರ್ಷದ ಮಧ್ಯಭಾಗದಲ್ಲಿ ದೇಶದ ಆರ್ಥಿಕತೆ ಕುಸಿಯುತ್ತಿತ್ತು. ಈ ಬಗ್ಗೆ ಎಚ್ಚರ ವಹಿಸುವಂತೆ ಸರ್ಕಾರಕ್ಕೆ ನಾವು ಸಲಹೆ ನೀಡಿದ್ದೆವು. ಆದರೆ ಕೇಂದ್ರ ಸರ್ಕಾರ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವ ಬದಲು ಗರಿಷ್ಠ ಮೊತ್ತದ ನೋಟುಗಳನ್ನು ನಿಷೇಧಿಸಿತು. ಯಾವುದೇ ಮುನ್ಸೂಚನೆ ಇಲ್ಲದೇ 500, 1000 ರೂ ನೋಟುಗಳನ್ನು ನಿಷೇಧಿಸಿದ್ದರ ಪರಿಣಾಮ 14.5-15 ಲಕ್ಷ ಕೋಟಿ ಹಣ ಹಣಕಾಸು ವಹಿವಾಟು ವ್ಯವಸ್ಥೆಯಿಂದ ಹಿಂದಕ್ಕೆಳೆಯಲ್ಪಟ್ಟಿತು. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರ ಮನಮೋಹನ್ ಸಿಂಗ್ ಅವರು ನೀಡಿದ ಸಲಹೆಯನ್ನು ತಿರಸ್ಕರಿಸಿ ಟೀಕಿಸಲಾಯಿತು ಎಂದು ಚಿದಂಬರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 
ನೋಟು ನಿಷೇಧ ತಪ್ಪು ಕ್ರಮ, ಇದರಿಂದಾಗಿ ಭಾರತೀಯ ಆರ್ಥಿಕ ಸ್ಥಿತಿ ಸಂಕಷ್ಟಕ್ಕೆ ಸಿಲುಕಲಿದೆ ಎಂದು ನಾನು ಮತ್ತು ಮನಮೋಹನ್ ಸಿಂಗ್ ಎಚ್ಚರಿಸಿದ್ದೆವು. ಕೇಂದ್ರ ಸರ್ಕಾರದ ಈ ಕ್ರಮದಿಂದ ಆರ್ಥಿಕತೆ ಶೇ.1.3 ರಷ್ಟು ಕುಸಿತವಾಗಲಿದೆ ಎಂದು ಹೇಳಿದ್ದೆ ಎಂದು ಚಿದಂಬರಂ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com