ಘಟನೆ ಬಗ್ಗೆ ಮಾಹಿತಿ ನೀಡಿರುವ ಸಬ್ ಇನ್ಸ್ ಪೆಕ್ಟರ್ ವಿಷ್ಣುವರ್ಧನ್ ರೆಡ್ಡಿ, " ಕಾರ್ಟೂನ್ ನಲ್ಲಿ ಬರುವ ಪಾತ್ರದಂತೆಯೇ ತಾನೂ ಉರಿಯುತ್ತಿದ್ದೇನೆ ಎಂದು ಮೊಮ್ಮಗ ಕಿರುಚಿದ್ದನ್ನು ಅಜ್ಜ-ಅಜ್ಜಿ ಕೇಳಿಸಿಕೊಂಡಿದ್ದಾರೆ. ಕಾರ್ಟೂನ್ ನಲ್ಲಿ ಬರುವ ಪಾತ್ರವನ್ನು ಅನುಕರಣೆ ಮಾಡಲು ಹೋಗಿ ಬೆಂಕಿ ಹಚ್ಚಿಕೊಂಡಿರುವ ಸಾಧ್ಯತೆ ಇದೆ ಎಂದು ಕುಟುಂಬ ಸದಸ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬಾಲಪುರ್ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.