ಬೆಂಗಳೂರು: ಜೈಲಿನಲ್ಲಿ ಶಶಿಕಲಾ ಭೇಟಿ ಮಾಡಿದ ದಿನಕರನ್

ಎಐಎಡಿಎಂಕೆ ಪಕ್ಷದಿಂದ ವಜಾಗೊಂಡ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಇಂದು ಪಕ್ಷದ...
ಟಿಟಿವಿ ದಿನಕರನ್
ಟಿಟಿವಿ ದಿನಕರನ್
Updated on
ಬೆಂಗಳೂರು: ಎಐಎಡಿಎಂಕೆ ಪಕ್ಷದಿಂದ ವಜಾಗೊಂಡಿದ್ದ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಇಂದು ಪಕ್ಷದ ನಾಯಕಿ ವಿ.ಕೆ.ಶಶಿಕಲಾ ಅವರನ್ನು ಭೇಟಿ ಮಾಡಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ತೆರಳಿದರು. 
ಪಕ್ಷದ ಎರಡು ಎಲೆಯ ಚಿಹ್ನೆಗಾಗಿ ಚುನಾವಣಾ ಆಯೋಗ ಅಧಿಕಾರಿಗಳಿಗೆ ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ದೆಹಲಿ ಕೋರ್ಟ್ ಕಳೆದ ಗುರುವಾರ ದಿನಕರನ್ ಗೆ ಜಾಮೀನು ನೀಡಿತ್ತು. ಶಶಿಕಲಾ, ತನ್ನ ಅಳಿಯ ದಿನಕರನ್ ರನ್ನು ಪಕ್ಷದ ಉಪ ಪ್ರಧಾನ ಕಾರ್ಯದರ್ಶಿಯಾಗಿ ಜೈಲಿಗೆ ಹೋಗುವ ಮುನ್ನ ನೇಮಕ ಮಾಡಿದ್ದರು.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ವಿ.ಕೆ.ಶಶಿಕಲಾ ಕಳೆದ ಫೆಬ್ರವರಿಯಲ್ಲಿ ಜೈಲು ಸೇರಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com