ಸಭೆಯಲ್ಲಿ ಭಾಗವಹಿಸಿದ್ದ ಎಲ್ಲಾ ರಾಷ್ಟ್ರಗಳು ತಮ್ಮ ರಾಷ್ಟ್ರಗಳ ಇತಿಹಾಸದ ಬಗೆಗಿನ ವಿಶೇಷವಾದ ಅಂಶಗಳನ್ನು ಪ್ರದರ್ಶಿಸಿದವು. ಈ ಕಾರ್ಯಕ್ರಮದಲ್ಲಿ ಭಾರತ ಹಾಗೂ ಪಾಕಿಸ್ತಾನ ಎರಡೂ ರಾಷ್ಟ್ರಗಳು ಮೊಘಲ್ ದೊರೆ ಷಹ ಜಹಾನ್ ನ ಪರಂಪರೆಯ ಹಕ್ಕನ್ನು ಪ್ರತಿಪಾದಿಸಿದ್ದು, ದೆಹಲಿಯಲ್ಲಿ ತ್ರಿವರ್ಣಧ್ವಜವಿರುವ ಕೆಂಪುಕೋಟೆಯನ್ನು ತೋರಿಸಿ ಪಾಕಿಸ್ತಾನ ತನ್ನ ಇತಿಹಾಸವನ್ನು ವರ್ಣಿಸಿದೆ. ಅಷ್ಟೇ ಅಲ್ಲದೇ ಅದು ಲಾಹೋರ್ನಲ್ಲಿ ಶಲಾಮಾರ್ ಗಾರ್ಡನ್ಸ್ ನ ಕೋಟೆ ಎಂದೂ ಪಾಕಿಸ್ತಾನ ಹೇಳಿರುವುದಾಗಿ ವರದಿ ಪ್ರಕಟವಾಗಿದೆ. "ಇವೆಲ್ಲವೂ ಷಹ ಜಹಾನ್ ಆಡಳಿತಾವಧಿಯಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಮೊಘಲ್ ನಾಗರಿಕತೆಯ ಮಾಸ್ಟರ್ ಪೀಸ್ ಗಳು ಎಂದು ಹೇಳಿದೆ.