ಕಳೆದ ಮೂರು ವರ್ಷಗಳಿಂದ ಸಾಕಷ್ಟು ಯೋಗ ಸಂಸ್ಥೆಗಳು ಆರಂಭಗೊಂಡಿವೆ. ಇದು ನನಗೆ ಸಾಕಷ್ಟು ಸಂತಸವನ್ನು ತಂದಿದೆ. ಯೋಗ ಶಿಕ್ಷಕರ ಬೇಡಿಕೆಗಳು ಕೂಡ ಹೆಚ್ಚಾಗಿದೆ. ಆರೋಗ್ಯ ಹಾಗೂ ಶಕ್ತಿ-ಯುಕ್ತಿಯಿಂದ ಇರುವುದು ಅತ್ಯಂತ ಪ್ರಮುಖವಾದದ್ದು. ಉತ್ತಮ ಆರೋಗ್ಯ ಸಾಧಿಸಲು ಯೋಗ ಉತ್ತಮವಾದ ದಾರಿಯಾಗಿದೆ ಎಂದು ತಿಳಿಸಿದ್ದಾರೆ.
ನಂತರ ಮಾತನಾಡಿದ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಮಳೆಯ ನಡುವೆಯೂ ತಾಳ್ಮೆಯಿಂದ ಕೆಲಸ ಮಾಡುತ್ತಿರುವ ಸ್ವಯಂ ಸೇವಕರಿಗೆ ಧನ್ಯವಾದಗಳು. ಯೋಗ ಜೀವನದ ಕಲೆಯಾಗಿದೆ. ಒಗ್ಗಟ್ಟಿನ ಮಂತ್ರವನ್ನು ಯೋಗ ಹೇಳಿಕೊಡುತ್ತದೆ. ಯೋಗ ನಮ್ಮ ಸಂಸ್ಕೃತಿ ಭಾಗವಾಹಿದ್ದು, ಒಗ್ಗಟ್ಟಿನಿಂದ ಇರುವಂತೆ ಮಾಡುತ್ತದೆ ಎಂದು ಹೇಳಿದ್ದಾರೆ.
ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಈ ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆ, ಸರ್ಕಾರೇತರ ಸಂಸ್ಥೆಗಳು, ಯೋಗ ಗುರುಗಳು ಮಳೆಯ ನಡುವೆಯೂ ಸುಮಾರು 80 ನಿಮಿಷಗಳ ಕಾಲ ಯೋಗಾಭ್ಯಾಸವನ್ನು ಮಾಡಿದರು.