ಮುಂಬಯಿ: ಮಹಾರಾಷ್ಟ್ರದ ನಕ್ಸಲ್ ಪೀಡಿತ ಅರ್ಮೊರಿ ವಿಧಾನಸಭಾ ಕ್ಷೇತ್ರದ ಶಾಸಕ ಕೃಷ್ಣ ಗಜ್ಬೆ ಅವರ ಅಂಗರಕ್ಷಕ ಭಾಸ್ಕರ್ ಚೌಕೆ(34) ಪಿಸ್ತೂಲ್ನಿಂದ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಗಡ್ಚಿರೋಲಿ ಜಿಲ್ಲೆಯ ಆರ್ಮೋರಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕ ಕೃಷ್ಣ ಗಜಬೆ ಅವರ ವಾರ್ಸಾ ತೆಹಶೀಲ್ನಲ್ಲಿರುವ ಕಚೇರಿಯಲ್ಲಿ ಅವರ ಬಾಡಿಗಾರ್ಡ್, 34ವರ್ಷದ ಭಾಸ್ಕರ್ ಚೌಕೆ ಹುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬಾಡಿಗಾರ್ಡ್ ಭಾಸ್ಕರ್ ಚೌಕೆಯ ಆತ್ಮಹತ್ಯೆ ಪ್ರಕರಣದಲ್ಲಿ ಯಾವುದೇ ರಾಜಕೀಯ ಉದ್ದೇಶ ಕಾಣುವುದಿಲ್ಲ; ಆತ ಕೌಟುಂಬಿಕ ಕಾರಣಗಳಿಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಆತನಿಗೆ ವಿವಾಹಿತ ಮಹಿಳೆಯೊಬ್ಬಳೊಂದಿಗೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ ಎಂದು ಎಸ್ಪಿ ದೇಶ್ಮುಖ್ ತಿಳಿಸಿದ್ದಾರೆ.