ಚೀನಾ ತನ್ನ ಪ್ರದೇಶ ಎಂದು ಕರೆದುಕೊಳ್ಳುತ್ತಿರುವ ಡೊಂಗ್ಲ್ಯಾಂಗ್ ಪ್ರದೇಶದಲ್ಲಿ ನಡೆಯುತ್ತಿದ್ದ ರಸ್ತೆ ನಿರ್ಮಾಣ ಕಾಮಗಾರಿಯನ್ನು ಭಾರತೀಯ ಪಡೆ ಸಿಬ್ಬಂದಿಗಳು ತಡೆದಿದ್ದರು. ಭಾರತೀಯ ಪಡೆಗಳು ರಸ್ತೆ ನಿರ್ಮಾಣ ಕಾಮಗಾರಿಯನ್ನು ತಡೆಗಟ್ಟಿದ್ದರಿಂದ ಚೀನಾ ಮಾನಸಸರೋವರಕ್ಕೆ ಕೈಗೊಂಡಿದ್ದ ಭಾರತದ 47 ಯಾತ್ರಾರ್ಥಿಗಳನ್ನು ತಡೆದಿತ್ತು. ಈಗ ನಾಥು ಲಾ ಪಾಸ್ ಗೆ ಪ್ರವೇಶವನ್ನೂ ನಿರ್ಬಂಧಿಸಿದೆ.