ಭಾರತದ ದೊಡ್ಡ ಕಪಟಿ ಪ್ರಧಾನಿ ಮೋದಿ: ಕಾಂಗ್ರೆಸ್

ಗೋ ಭಕ್ತಿಯ ಹೆಸರಲ್ಲಿ ಮನುಷ್ಯರ ಹತ್ಯೆ ತಪ್ಪು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಯನ್ನು ತಿರಸ್ಕರಿಸಿರುವ ಕಾಂಗ್ರೆಸ್, ಭಾರತದ ದೊಡ್ಡ ಕಪಟಿ ಪ್ರಧಾನಿ ಮೋದಿ ಎಂದು...
ಪ್ರಧಾನಮಂತ್ರಿ ನರೇಂದ್ರ ಮೋದಿ
ಪ್ರಧಾನಮಂತ್ರಿ ನರೇಂದ್ರ ಮೋದಿ
Updated on
ಮುಂಬೈ: ಗೋ ಭಕ್ತಿಯ ಹೆಸರಲ್ಲಿ ಮನುಷ್ಯರ ಹತ್ಯೆ ತಪ್ಪು ಎಂಬ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೇಳಿಕೆಯನ್ನು ತಿರಸ್ಕರಿಸಿರುವ ಕಾಂಗ್ರೆಸ್, ಭಾರತದ ದೊಡ್ಡ ಕಪಟಿ ಪ್ರಧಾನಿ ಮೋದಿ ಎಂದು ಶುಕ್ರವಾರ ಹೇಳಿದೆ. 
ಮೋದಿಯವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ಎನ್.ಎ.ಹ್ಯಾರಿಸ್, ಗೋಹತ್ಯೆ ವಿಚಾರಗಳ ಕುರಿತಂತೆ ಹೇಳಿಕೆ ನೀಡುವ ಬಹದಲು ಪ್ರಧಾನಮಂತ್ರಿಗಳು ಮೊದಲು ಸಮಾಜ ವಿರೋಧಿಗಳನ್ನು ಹಿಡಿದು ಜೈಲಿಗಟ್ಟಬೇಕು ಎಂದು ಹೇಳಿದ್ದಾರೆ. 
ದೇಶದ ದೊಡ್ಡ ಕಪಟಿಯೇ ಪ್ರಧಾನಿ ಮೋದಿ. ಅವರು ಹೇಳುವುದೇ ಒಂದು, ಮಾಡುವುದೇ ಇನ್ನೊಂದು. ಮಾತನಾಡುವ ಬದಲು ಮೋದಿಯವರು ಗೋರಕ್ಷಕರನ್ನು ಹಿಡಿದು ಜೈಲಿಗೆ ಕಳುಹಿಸಬೇಕು. ಗೋರಕ್ಷಕರು ಸಮಾಜ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಗೋವುಗಳನ್ನು ಯಾರು ಮಾರುತ್ತಿದ್ದಾರೆ, ಯಾರು ಕೊಳ್ಳುತ್ತಿದ್ದಾರೆ. ಇದನ್ನು ಕಂಡು ಹಿಡಿಯಲು ಸರ್ಕಾರ ಹೊಸ ನಿಯಮವನ್ನು ಜಾರಿಗೆ ತರಬೇಕಿದೆ. 
ಮೋದಿ ನಿಜಕ್ಕೂ ಗೋವುಗಳನ್ನು ಪ್ರೀತಿಸುವುದೇ ಆದರೆ, ಗೋವುಗಳ ರಫ್ತು ಮಾಡುವುದನ್ನು ನಿಲ್ಲಿಸಲಿ. ಏಕಕಾಲದಲ್ಲಿ ಗೋಹತ್ಯೆಯನ್ನು ನಿಷೇಧಿಸಲಿ. ಈ ವಿಚಾರ ಹಿಂದೂ ಮತ್ತು ಮುಸ್ಲಿಮರ ವಿಚಾರವಲ್ಲ. ಮನುಷ್ಯನ ಜೀವನಕ್ಕೆ ಸಂಬಂಧಿಸಿದ್ದು. ಅದಕ್ಕೆ ನಾವು ಬೆಲೆ ಕೊಡಬೇಕು ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com