ಕಾವೇರಿ ವಿವಾದ ಈವರೆಗೂ ಬಗೆಹರಿದಿಲ್ಲ. ಸುಪ್ರೀಂಕೋರ್ಟ್ ನಿರ್ದೇಶನದಂತೆ ಕಾವೇರಿ ಮಂಡಳಿ ರಚನೆ ಮಾಡುವುದರಲ್ಲಿ ಕೇಂದ್ರ ಸರ್ಕಾರ ವಿಫಲಾಗಿದೆ. ಅಂತರ್ ರಾಜ್ಯಗಳಲ್ಲಿ ಜಲ ವಿವಾದವಿದ್ದರೂ ಕೇಂದ್ರ ಸರ್ಕಾರ ಮಾತ್ರ ಮೌನವಹಿಸಿದೆ. ತಮಿಳುನಾಡು ರಾಜ್ಯಕ್ಕೆ ಬಿಜೆಪಿ ಸರ್ಕಾರ ಯಾವಾಗಲೂ ವಂಚಿಸುತ್ತಲೇ ಇದೆ. ನೀಟ್, ಹಿಂದಿ ಮತ್ತು ಸಂಸ್ಕೃತ ಹೇರಿಕೆ, ರೈಲ್ವೇ ಯೋಜನೆಗಳಿಗೆ ಹಣ ಬಿಡುಗಡೆ ಮಾಡದಿರುವುದು ಹಾಗೂ ಮೀನುಗಾರರ ಸಮಸ್ಯೆ ಹೀಗೆ ನಾನಾ ವಿಚಾರಗಳಲ್ಲಿ ವಂಚಿಸಿದೆ ಎಂದಿದ್ದಾರೆ.