ಪನ್ನೀರ್ ಸೆಲ್ವಂ ಬಣ ಸೇರಿದ ಎಐಎಡಿಎಂಕೆ ಶಾಸಕ ಅರುಣ್ ಕುಮಾರ್

ಶಶಿಕಲಾ ವಿರುದ್ಧ ಬಂಡಾಯವೆದ್ದಿದ್ದ ಒ.ಪನ್ನೀರ್ ಸೆಲ್ವಂ ಅವರ ಬಣಕ್ಕೆ ಎಐಎಡಿಎಂಕೆ ಪಕ್ಷದ ಶಾಸಕ ಅರುಣ್ ಕುಮಾರ್ ಅವರು ಭಾನುವಾರ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಪನ್ನೀರ್ ಸೆಲ್ವಂ ಅವರ ಬೆಂಬಲಿಗರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ...
ಒ.ಪನ್ನೀರ್ ಸೆಲ್ವಂ
ಒ.ಪನ್ನೀರ್ ಸೆಲ್ವಂ
ಚೆನ್ನೈ; ಶಶಿಕಲಾ ವಿರುದ್ಧ ಬಂಡಾಯವೆದ್ದಿದ್ದ ಒ.ಪನ್ನೀರ್ ಸೆಲ್ವಂ ಅವರ ಬಣಕ್ಕೆ ಎಐಎಡಿಎಂಕೆ ಪಕ್ಷದ ಶಾಸಕ ಅರುಣ್ ಕುಮಾರ್ ಅವರು ಭಾನುವಾರ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಪನ್ನೀರ್ ಸೆಲ್ವಂ ಅವರ ಬೆಂಬಲಿಗರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 
ಕೊಯಿಮತ್ತೂರು ಉತ್ತರದ ಎಐಎಡಿಎಂಕೆ ಶಾಸಕ ಪಿಆರ್'ಜಿ ಅರುಕುಮಾರ್ ಅವರು ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಕೂವತೂರಿನ ರೆಸಾರ್ಟ್ ನಿಂದ ಏನನ್ನೂ ಮಾತನಾಡದೆ ಹೊರ ಬಂದಿದ್ದರು. ಫೆ.18ರಂದು ನಡೆದ ವಿಶ್ವಾಸ ಮತಯಾಚನೆಗೆಯಲ್ಲಿ ಅರುಣ್ ಅವರು ಪಾಲ್ಗೊಂಡಿರಲಿಲ್ಲ. ಇದೀಗ ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ತಮ್ಮ ನಿವಾಸದಿಂದಲೇ ನಿನ್ನೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. 
ಎಐಎಡಿಎಂಕೆ ಪಕ್ಷದ ಕುಟುಂಬ ಒಡೆಯುತ್ತಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ. 
ಅರುಣ್ ಕುಮಾರ್ ಅವರ ಈ ನಡೆಗೆ ಪ್ರತಿಕ್ರಿಯೆ ನೀಡಿರುವ ಎಐಎಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್ ಅವರು, ಅರುಣ್ ಕುಮಾರ್ ಅವರು ತಮ್ಮ ನಿರ್ಧಾರವನ್ನು ಹಿಂಪಡೆದುಕೊಂಡು ಮತ್ತೆ ಪಕ್ಷಕ್ಕೆ ಸೇರ್ಪಡೆಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com